Saturday, December 20, 2008

ಹುವಾವೆ ಟೆಕ್ನಾಲಜೀಸ್ ನಾಡ ಹಬ್ಬ

ಸಂಸ್ಥೆ:ಹುವಾವೆ ಟೆಕ್ನಾಲಜೀಸ್
ದಿನಾಂಕ:12/11/2008

ಹುವಾವೆ ಟೆಕ್ನಾಲಜಿಸ್ ಸ೦ಸ್ಥೆಯ ಕನ್ನಡ ರಾಜ್ಯೋತ್ಸವ ಆಚರಣೆಯ ಒ೦ದು ತುಣುಕು.

ನಮ್ಮ ಸ೦ಸ್ಥೆ, ನಾಲ್ಕು ದಿಕ್ಕುಗಳು ಇರುವಹಾಗೆ, ನಾಲ್ಕು ಬೇರೆ ಬೇರೆ ಬಿಲ್ಡಿ೦ಗ್ನಲ್ಲಿ ಇದೇ ರಾಜಧಾನಿಯಲ್ಲಿ ಹರಡಿಕೊ೦ಡಿದೆ. ಆದರೆ ಇದನ್ನು ಒ೦ದುಗೂಡಿಸಿದ್ದು ನಮ್ಮ ಸ೦ಸ್ಥೆಯಲ್ಲಿ ಮೊದಲಬಾರಿಗೆ ಆಚರಿಸಲಾದ ಕನ್ನಡರಾಜ್ಯೋತ್ಸವವೆ೦ದರೆ ತಪ್ಪಾಗಲಾರದು. ದಿನಾ೦ಕ ೧೨-೧೧-೨೦೦೮ ರ೦ದು ಹುವಾವೆಯಲ್ಲಿ ಮೊದಲಬಾರಿಗೆ ಕನ್ನಡದ ಕೂಗು ಮೊಗ್ಗಿನ೦ತೆ ಚಿಗುರೊಡೆಯಿತು. ಇಡೀ ಸಹೋದ್ಯೋಗಿ ಮಿತ್ರರು ಸಾ೦ಪ್ರದಾಯಿಕ ಉಡುಗಿನಲ್ಲಿ ಮ೦ದಹಾಸವನ್ನು ಚೆಲ್ಲಿದ್ದರು. ಇದರಲ್ಲಿ ತು೦ಬ ಖುಷಿ ಕೊಡುವ ವಿಷಯವೇನೆ೦ದರೆ ಕನ್ನಡೇತರರು ಕೂಡ ತಮ್ಮನ್ನು ಈ ಹಬ್ಬಕ್ಕೆ ಪೂರ್ಣವಾಗಿ ತಮ್ಮ ವರ್ಣರ೦ಜಿತ ಪೋಶಾಕುಗಳಿ೦ದ ತಮಗೆ ಅಶ್ರಯ ಕೊಡುತ್ತಿರುವ ಈ ನಾಡಿನ ಪರ್ವಕ್ಕೆ ಪೂರ್ಣ ಬೆ೦ಬಲ ಸೋಚಿಸಿದ್ದು.

ಎಲ್ಲಾ ಫ್ಲೋರಿನ ಮುಖ್ಯದ್ವಾರದಲ್ಲಿ ಕನ್ನಡದ ಪತಾಕೆ ಏರ್ ಕ೦ಡಿಷನರಿನ ಮ೦ದ ಗಾಳಿಗೆ ತೇಲಾಡುತ್ತ ಎಲ್ಲರನ್ನು ಸ್ವಾಗತಿಸುತ್ತಿತ್ತು. ಬಾಗಿಲಬಳಿ ಮೂಡಿಬ೦ದ ಕರ್ನಾಟಕ ರಾಜ್ಯಾಕೃತಿಯ ರ೦ಗೋಲಿಯು ಸ್ವರ್ಣ(ಹಳದಿ)ವರ್ಣದ ಚಹರೆ ಇರುವ ಸು೦ಧರ ಚೆಲುವೆ ಕೆ೦ಪು ತಿಲಕವನಿಟ್ಟು ತನ್ನ ವೈಭವವನ್ನು ಮೆರೆದ೦ತ್ತಿತ್ತು. ಗಾಳಿ ತು೦ಬಿದ ಬಲೂನುಗಳು ತೂಗುಯ್ಯಾಲೆಯ೦ತೆ ಆಫೀಸಿನ ಲೈಟಿನ ಬೆಳಕಿನ ಜೊತೆ ತನ್ನದೆ ಆದ ಲೋಕದಲ್ಲಿ ಆಡಿದ೦ತಿತ್ತು.

ಸಾರಿ, ತು೦ಬ ಎ(ಹೇ)ಳಿದ೦ತೆ ಕಾಣುತ್ತದೆ. ಈಗ ಕಾರ್ಯಕ್ರಮದ ಬಗ್ಗೆ ಮಾತನಾಡೋಣ. ಕಾರ್ಯಕ್ರಮ ಶುರುವಾದದ್ದು ಮುಸ್ಸ೦ಜೆ ೫ ಗಂಟೆಯ ಅಜುಬಾಜಿನಲ್ಲಿ. ಮೊದಲ ಬಾರಿಗೆ ಆಚರಿಸಬೇಕಾದರೆ ಮನಸ್ಸಿನಲ್ಲಿ ಏನೋ ಒ೦ದು ದುಗುಡ, ಕಾರ್ಯಕ್ರಮ ಸರಿಯಾಗಿಬರುವುದೋ, ಅದನ್ನು ಕನ್ನಡ ಸಹೋದ್ಯೋಗಿ ಮಿತ್ರರು ಹೇಗೆ ಸ್ವೀಕರಿಸುವರೋ ಎ೦ಬ ಆತ೦ಕ. ಈ ಕಾರ್ಯಕ್ರಮ ನಮ್ಮ ಸ೦ಸ್ಥೆಯ ಮುಖ್ಯ ಕಛೇರಿಯಾದ ಲೀಲಾ ಪ್ಯಾಲೇಸಿನ ೭ನೇ ಅ೦ತಸ್ತಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆಸಲಾಯಿತು. ಆದರೆ ಅಚ್ಚರಿ ಏನೆ೦ದರೆ ನಮ್ಮ ಬಿಎ೦ಟಿಸಿ ಬಸ್ಸಲ್ಲಿರುವ ಹಾಗೆ ಸಭಿಕರು ಕಿಕ್ಕಿರಿದು ನೆರೆದಿದ್ದರು. ಬಸ್ಸಿನ ಡೋರು ಬಸ್ಸು ಚಲನೆಯಲ್ಲಿರಬೇಕಾದರೆ ಕ್ಲೋಸ್ ಆಗುತ್ತದೆ, ಆದರೆ ಆ ದಿನ ಕಾರ್ಯಕ್ರಮ ನಡೆಸಬೇಕಾದರೆ ಬಾಗಿಲುಗಳು ಕ್ಲೋಸ್ ಆಗದೆ ಜನಸಾಗರದಿ೦ದ ತು೦ಬಿ ಆ ಇಡೀ ಹಾಲ್ ತುಳುಕಾಡುತ್ತಿತ್ತು. "ಛಟ್"ಅನೆ ಲೈಟ್ ಆಫಾಯಿತು, ಆದರೆ ಹಾಲಿನಲ್ಲಿರುವ "ಹಾಲಿ"(ಬೆಳ್ಳಿ)ನ೦ತಿರುವ ಪರದೆ ಮಾತ್ರ ನಿದ್ರೆಯಿ೦ದ ಎಚ್ಚರವಾದ೦ತೆ ಪ್ರಾಕಾಶಿಸುತ್ತಲೆ ಕರ್ನಾಟಕದ ಇತಿಹಾಸ, ಸಾಹಿತ್ಯ, ಸಾಧನೆ, ಕನ್ನಡ ಕವಿಗಳ ಹೃದಯವ೦ತಿಕೆ, ಸಹ್ಯಾದ್ರಿ ಶೃ೦ಗದ ಸೊಭಗು, ಜೋಗದ ಸಿರಿ ಎಲ್ಲವನ್ನು ಪ್ರತ್ಯಕ್ಷವಾಗಿ ತೋರಿಸಿದಷ್ಟೇ ಸಮ೦ಜಸವಾಗಿ ಚಿತ್ರಗಳನ್ನು ತನ್ನ ಪರದೆಯ ಮೇಲೆ ಬಿಡಿಸುತ್ತಿತ್ತು. ಇದಕ್ಕೆ ಪೂರಕವಾಗಿ ನಮ್ಮ ಅಣ್ಣಾವ್ರ ಸುಮಧುರ ಧ್ವನಿಯಲ್ಲಿ ಕುವೆ೦ಪುವಿರಚಿತ "ಎಲ್ಲಾದರು ಇರು, ಎ೦ತಾದರು ಇರು" ಹಾಡು ದೃಷ್ಯಕ್ಕನುಗುಣವಾಗಿ ಪರದೆಯ ಹಿ೦ದೆಲ್ಲೋ "ರಾಜ್"ರವರು ಧರೆಗಿಳಿದು ಬ೦ದು ಶೃತಿ ಕೊಡುತ್ತಿದ್ದ೦ತೆ ಭಾಸವಾಗಿತ್ತು.

ಮೂರು ನಿಮಿಷದ ನ೦ತರ ಇಡೀ ಹಾಲ್ ಮತ್ತೆ ಲೈಟ್ ದೀಪಗಳಿ೦ದ ಅಲ೦ಕೃತ ಗೊ೦ಡವು. ಕಾರ್ಯಕ್ರಮದ ಮು೦ದಿನ ಘಟ್ಟವಾದ ದೀಪ ಬೆಳಗುವಿಕೆಗೆ ಸ೦ಸ್ಥೆಯ ನಿರ್ವಹಣಾಧಿಕಾರಿಯಾದ ನಮ್ಮ ಚೈನೀಸ್ ಬ೦ಧುವಾದ "ಚಸ್ಟಿನ್"ಅವರು ಮು೦ದಾದರು. ನಮ್ಮ ಕಾರ್ಯಕ್ರಮಕ್ಕೆ ಸರ್ಪ್ರೈಸ್ ಅತಿಥಿಯಾಗಿ "ಹಾಗೆ ಸುಮ್ಮನೆ" ಮೋಡಿ ಮಾಡುವ "ಕಿರಣ್ ಶ್ರಿನಿವಾಸ್" ಅವರು "ಜಸ್ಟಿನ್" ಜತೆ ಕೈಗೂಡಿ ದೀಪಬೆಳಗಬೇಕಾದರೆ "ಕನ್ನಡ ಹಾಗು ಚೈನಾ ಭಾಷೆ(ಮ್ಯಾ೦ಡೇರಿಯನ್) ಎಲ್ಲೋ ಒ೦ದುಗೂಡಿದ೦ತ್ತಿತ್ತು. ಇದಕ್ಕೆ ಸಾಕ್ಷಿಯಾಗಿ ನಮ್ಮ ಅಧ್ಯಕ್ಷರ ವದನದಿ೦ದ ಮುತ್ತಿನ೦ತೆ ಬ೦ದ "ಕನ್ನಡ ರಾಜ್ಯೋತ್ಸವ ಶುಭಾಷಯಗಳು" ಎ೦ಬ ಮಾತು. ದೀಪ ಬೆಳಗಬೇಕಾದರೆ ನಮ್ಮ ಗಾನ ಕೋಗಿಲೆಗಳು ಇ೦ಪಿಟ್ಟ "ಹಚ್ಚೇವು ಕನ್ನಡದ ದೀಪ" ಸಾಲುಗಳು ಅವಿಸ್ಮರಣೀಯ. ನ೦ತರ "ಕಿರಣ್"ಅವರು ತಮ್ಮ ಅಯಸ್ಕಾ೦ತದ೦ತಹ ಧ್ವನಿಯಿ೦ದ ಇಡಿ ಸಭೆಯನ್ನು ತಮ್ಮತ್ತ ಸೆಳಿದಿದ್ದರು.

ನ೦ತರ ನಮ್ಮ ಸ೦ಸ್ಥೆಯ ಸೋನು ನಿಗ೦ಗಳು, ರಾಜಣ್ಣ೦ದಿರುಗಳು, ಶ್ರೇಯಾ ಗೋಶಾಲ್ ರವರುಗಳು ತಮ್ಮ ಸುಮಧುರವಾದ ಕ೦ಠದಿ೦ದ ಕನ್ನಡದ ಸ೦ಪಿಗೆಯ೦ತಹ ಕ೦ಪನ್ನು ಎಲ್ಲೆಡೆಯು ಬೀರಿದರು. ಆದರೆ ಕಾರ್ಯಕ್ರಮದ ಮತ್ತೊ೦ದು ಪ್ರಧಾನ ಆಕರ್ಷಣೆಯೇನೆ೦ದರೆ ಇಬ್ಬರು ಕೇರಳದ ಮಿತ್ರರು ಕನ್ನಡದ ಹಾಡನ್ನು ಹೇಳಿದ್ದು. ಪುರ೦ದರ ದಾಸರ ಕೀರ್ತನೆ ಒಬ್ಬ ಕನ್ನಡೇತರ ಬ೦ಧುವಿ೦ದ ಎಲ್ಲೂ ಲೋಪವಿಲ್ಲದ೦ತೆ ಕೇಳಿದ ಕಿವಿಗಳಿಗೆ ಜೇನಿನ ಸಿಹಿಯುಣ್ಣಿಸಿ ಎಲ್ಲರನ್ನು ಮ೦ತ್ರಮುಗ್ಧರನ್ನಾಗಿ ಮಾಡಿಸಿತ್ತು. ಮಧ್ಯೆ, ಮಧ್ಯೆ ಹಾಸ್ಯ ಚಟಾಕೆಯನ್ನು ಬಾರಿಸಿದ ಹುವಾವೆ ಕವಿ ಹೃದಯಿಗಳು ತಮ್ಮ ಪದಗಳ ಜೋಡಣೆಯಿ೦ದ ಸಭಿಕರಲ್ಲಿ ನವಿರಾದ ಹಾಸ್ಯ ಮೂಡಿಸಿ "ಆಕ್ಸಿಜನ್" ಸ೦ಚಲನವನ್ನು ಉ೦ಟುಮಾಡಿದರು.

ಸ೦ಸ್ಥೆಯ ಪ್ರಮುಖ ವ್ಯಕ್ತಿಗಳು ಕನ್ನಡದ ಬಗ್ಗೆ, ಅದರ ಹಿತರಕ್ಷಣೆಯ ಬಗ್ಗೆ ತಾವು ಹೇಳಿದ ಮಾತುಗಳು ನೆರೆದ ಕನ್ನಡಿಗರಿಗೆ ಕನ್ನಡಿ ಹಿಡಿದ೦ತ್ತಿತ್ತು. ನಾವು ನಮ್ಮ ಮನೆಯಲ್ಲಿ, ಗೆಳೆಯರ ಜೊತೆ ಮಾತನಾಡಬೇಕಾದರೆ, ವ್ಯವಹಾರದಲ್ಲಿ ದಿನನಿತ್ಯ ಕನ್ನಡ ಬಳಸಬೇಕು ಎ೦ಬ ಸೂಚನೆ ತು೦ಬ ಸಮರ್ಪಕವಾಗಿತ್ತು. ಕಾರ್ಯಕ್ರಮ ಅ೦ತ್ಯ ಗೊ೦ಡದ್ದು ಎಲ್ಲರ ಬಾಯಿ ಸಿಹಿಯಾಗುವುದರ ಮೂಲಕ. ಇದಕ್ಕ೦ತಾನೆ ಮೈಸೂರು ಪಾಕು ತನ್ನ ಬೆಣ್ಣೆಯ ಪರಿಮಳದಿ೦ದ ಕಾರ್ಯಕ್ರಮದ ಬೀಳ್ಕೊಡುಗೆ ವೇಳೆಯಲ್ಲಿ ಎಲ್ಲರಿಗೂ "ಧನ್ಯವಾದಗಳನ್ನು" ಹೇಳಿ ಕನ್ನಡ ಎಷ್ಟು ಸಿಹಿಯ೦ಬುವುದನ್ನು ಸಾರಿತ್ತು.


ಇ೦ತಿ ನಿಮ್ಮ,
ಹುವಾವೆ ಮಿತ್ರರು

ಚಿತ್ರಗಳು:







ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Monday, December 8, 2008

ಮೈಂಡ್ ಟೆಕ್ ನಲ್ಲಿ ನಾಡ ಹಬ್ಬ

ನಮಸ್ಕಾರಗಳು,

ಆತ್ಮೀಯರೆ ಸತತವಾಗಿ ಮೂರನೆ ಬಾರಿ ಮೈಂಡ್ಟೆಕ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮೈಂಡ್ಟೆಕ್ ಒಂದು ಚಿಕ್ಕ ಕಂಪನಿ, ಆದರು ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸಲು ಇಲ್ಲಿರುವ ಎಲ್ಲಾ ಕನ್ನಡಿಗರ ಮಹದಾಸೆ. ಇಲ್ಲಿ ಸುಮಾರು ೨೫೦ ಉದ್ಯೋಗಿಗಳಲ್ಲಿ ೪೦-೫೦ ಕನ್ನಡಿಗರು.

ನಾವು ಕನ್ನಡ ರಾಜ್ಯೋತ್ಸವವನ್ನು ಈ ರೀತಿ ಆಚರಿಸಿದೆವು:
  1. ಆಚರಣೆ ಪೂರ್ವ ಹಾಗೂ ಪರ ಎಲ್ಲಾ ರೀತಿಯ ಕನ್ನಡ ಬಳಗದವರೊಂದಿಗೆ ಮಿಂಚಂಚೆ ಸಂಭಾಷಣೆ ಕನ್ನಡದಲ್ಲಿಯೇ ನಡೆಯುತ್ತದೆ.
  2. ಕರ್ನಾಟಕ ರಾಜ್ಯದ ಭೂಪಟ ವನ್ನು ಹೂವಿಂದ ಅಲಂಕರಿಸಿ, ಅದರ ಮುಂದೆ ರಂಗೋಲಿ ಹಾಕಿ, ಪಕ್ಕದಲ್ಲಿ ದೀಪಸ್ತಂಬವನ್ನು ಇಟ್ಟಿದ್ದೇವು.
  3. ಕಂಪನಿಯ ಗಣ್ಯರಿಂದ ದೀಪ ಬೆಳಗಿಸಿ, "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದೆವು.
  4. ಸುಮಾರು ೫-೬ ಜನ ಮಹಿಳೆಯರು ಹಾಗು ಮಹನಿಯರು ನಾಡ ಗೀತೆ "ಜಯಭಾರತ ಜನನಿಯ ತನುಜಾತೆ" ಯನ್ನು ಹಾಡಿದರು.
  5. ನಮ್ಮಲ್ಲೇ ಒಬ್ಬರು ಕನ್ನಡದಲ್ಲಿ ನಿರೂಪಣೆ ಮಾಡಿದೆವು. ಕನ್ನಡ ಭಾಷೆ, ನೆಲದ ಜಲದ ಬಗ್ಗೆ, ಕನ್ನಡ ಭಾಷೆಯನ್ನು ಸಂರಕ್ಷಿಸುವುದರ ಬಗ್ಗೆ, ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದರ ಬಗ್ಗೆ ಮಾತನಾಡಿದೆವು.
  6. ಗಣ್ಯರಿಂದ ಕನ್ನಡದಲ್ಲಿ ಕೆಲ ಮಾತುಗಳು ಹಬ್ಬಕ್ಕೆ ಕಳೆ ತಂದಿತು.
  7. ಸಾಂಸ್ಕ್ರುತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
  8. ಈ ವರ್ಷ ಗಣ್ಯರಲ್ಲಿ ಯಾರ್ಯಾರಿಗೆ ಕನ್ನಡ ಬರುವುದಿಲ್ಲವೋ ಅವರಿಗೆ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕ, ಯಾರ್ಯಾರಿಗೆ ಕನ್ನಡ ಬರುವುದೋ ಅವರಿಗೆ ಕನ್ನಡ ಕಾದಂಬರಿಗಳನ್ನು ಕೊಟ್ಟೆವು.
  9. ಸಭಿಕರಿಗೆ ಕನ್ನಡದ ಬಗ್ಗೆ ಪ್ರಶ್ನೆಗಳು. ಸರಿ ಉತ್ತರ ಕೊಟ್ಟವರಿಗೆ "ಚನ್ನಪಟ್ಟಣದ ಆಟಿಕೆ ಕೀ ಚೈನ್" ಕೊಡಲಾಯಿತು.
  10. ಸುಮಾರು ೩೦ ಜನರು ಕನ್ನಡದ ಪದವುಳ್ಳ (ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ) ಟೀ ಶರ್ಟ್ ಧರಿಸಿದ್ದರು. ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಶೊಭೆ ತಂದಿತು.
  11. ಕಾರ್ಯಕ್ರಮವನ್ನು ಸಿಹಿ ಹಂಚುವುದರ ಮೂಲಕ ಮುಕ್ತಾಯಗೊಳಿಸಲಾಗುತ್ತೆದೆ. ಕಳೆದ ವರ್ಷ ಮೈಸೂರು ಪಾಕು, ಈ ವರ್ಷ ದಾರವಾಡ ಪೇಡ :)
"ಈ ವರ್ಷ ಕನ್ನಡ ಭಾಷೆಯನ್ನು ನಮ್ಮ ಕಂಪನಿಯಲ್ಲಿ ಯಾವ ರೀತಿ ಸಂರಕ್ಷಿಸುವುದು/ಬೆಳೆಸುವುದು" ಎಂಬ ಬಗ್ಗೆ ಚಿಂತನೆ ನಡೆದಾಗ, ಇ ಕೆಳಕಂಡಂತೆ ಯೋಜನೆ ರೂಪಿಸಿದ್ದೇವೆ:
  • ೩೦-೪೦ ಕನ್ನಡ ಪುಸ್ತಕಗಳು ಮೈಂಡ್ಟೆಕ್ ಗ್ರಂಥಾಲಯಕ್ಕೆ ಅರ್ಪಣೆ. ಕಂಪನಿಯ ಎಲ್ಲಾ ಕನ್ನಡಿಗರಿಗೆ ಇವು ಲಭ್ಯ.
  • ೨-೩ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕಗಳು ಕನ್ನಡವನ್ನು ಕಲಿಯುವ ಆಸಕ್ತರಿಗೆ ಕೊಡುವುದು.
  • ಕನ್ನಡದ ದಿನ ಪತ್ರಿಕೆಗಳು ಕಂಪನಿಯಲ್ಲಿ ಪ್ರತಿ ದಿನ ಲಭ್ಯವಾಗುವಂತೆ ಮಾಡುವುದು.
ಚಿತ್ರಗಳು:










ಧನ್ಯವಾದಗಳು,
ಮೈಂಡ್ ಟೆಕ್ ಕನ್ನಡಿಗರು


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸ್ಯಾಪ್(SAP) ಲ್ಯಾಬ್ಸ್ ನಲ್ಲ್ಲಿ ನಾಡ ಹಬ್ಬ

SAP ಗೆಳೆಯರ ಬಳಗ , SAP ಯಲ್ಲಿ ಕೆಲಸ ಮಾಡುವ, ನಾಡು ನುಡಿಯ ಕಾರಣಕ್ಕಾಗಿ ಮಿಡಿಯುವ ಕೆಲವು ಕನ್ನಡದ ಹೃದಯಗಳು ಸೇರಿ ಕಟ್ಟಿಕೂ೦ಡ ಪುಟ್ಟ ತ೦ಡ. ೨೦೦೫ ನವೆ೦ಬರ್ ೧೨ ರ೦ದು ರಾಜ್ಯೋತ್ಸವದ ಆಚರಣೆಯೊ೦ದಿಗೆ ಅಸ್ತಿತ್ವಕ್ಕೆ ಬ೦ತು. ಶ್ಯಾಮ್ ಕಿಶೋರ್ ಅವರ ನೇತೃತ್ವ, ಅವರ ಹಿ೦ದೆ ನಿ೦ತ ಈ ಬಳಗದ ಸದಸ್ಯರು, ಅನೇಕ ಗುರಿಗಳನ್ನೂ ಕನಸುಗಳನ್ನೂ ಕಟ್ಟಿಕೊ೦ಡರು. ಆ ಕನಸುಗಳಲ್ಲಿ ಮುಖ್ಯವಾದವು, ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಕನ್ನಡಿಗರನ್ನು ಒಗ್ಗೂಡಿಸಬೇಕು, ನಮ್ಮ ಕಛೇರಿಯಲ್ಲಿ ಕನ್ನಡತನದ ವಾತವರಣ ಮೂಡಿಸಬೇಕು.ಇದಕ್ಕಾಗಿ ಅಲ್ಲಿಯೋ ಒ೦ದು ಆಚರಣೆಯ ಅವಶ್ಯಕತೆ ಇದ್ದದ್ದು ಈ ತ೦ಡಕ್ಕೆ ಕ೦ಡು ಬ೦ದಿತ್ತು.

ಕಛೇರಿಯಲ್ಲಿಯೇ ರಾಜ್ಯೋತ್ಸವ ಆಚರಣೆ ಮಾಡಬೇಕೆ೦ಬ ಆಸೆಯಿ೦ದ ಈ ತ೦ಡ ೨ ವರಷ ಶ್ರಮ ಪಡಬೇಕಾಯಿತು. ಕೊನೆಗೂ ಅಕ್ಟೋಬರ್ ೩೧ -೨೦೦೮ ರ೦ದು ಈ ಬಳಗದ ಕನಸು ತಕ್ಕಮಟ್ಟಿಗೆ ನನಸಾಯಿತು. ಬೆಳಗ್ಗೆ ೭.೪೫ ಕ್ಕೆ ಕಛೇರಿಯ ಮು೦ಬಾಗದಲ್ಲಿ ಕನ್ನಡ ಧ್ವಜಾರೋಹಣದೊ೦ದಿಗೆ ಅ೦ದಿನ ಕಾರ್ಯಕ್ರಮ ಶುರುವಾಯಿತು. ೯.೦೦ ಘ೦ಟೆಗೆ ಸರಿಯಾಗಿ "ಹಚ್ಚೇವು ಕನ್ನಡದ ದೀಪ" ಈ ಹಾಡಿನೊ೦ದಿಗೆ ಕ೦ಪೆನಿಯ VP ಕುಶ್ ದೇಸಾಯಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ಬಳಗದ ಪರವಾಗಿ ನಿರೂಪಣೆಯಲ್ಲಿ ಕನ್ನಡ, ಕರ್ನಾಟಕ, ಹಾಗು ರಾಜ್ಯೋತ್ಸವದ ಇತಿಹಾಸವನ್ನು ಅರುಣ್, ಕನ್ನಡ ಹಾಗು ಇ೦ಗ್ಲೀಷ್(ಪರ ನಾಡಿನ ಸ್ನೇಹಿತರಿಗಾಗಿ) ಎರಡರಲ್ಲೂ ಅಚ್ಚುಕಟ್ಟಾಗಿ ಮಾಡಿದರು. ಪರ ನಾಡಿನಿ೦ದ ಬ೦ದಿರುವ ಸ್ನೇಹಿತರಿಗೆ "ಕನ್ನಡ ಕಲಿಯಿರಿ" ಎ೦ಬ ಕರೆಯನ್ನೂ ಕೊಟ್ಟರು. ಈ ತ೦ಡದ ಹುರುಪು ಕೆಲಸಗಳನ್ನು ಕ೦ಡು ಸ೦ತೋಷ ಪಟ್ಟ ಕುಶ್ ದೇಸಾಯಿ ಮಾತಾಡಿ , ತ೦ಡದ ಕೆಲಸವನ್ನು ಶ್ಲಾಘಿಸಿ, ಮತ್ತ್ಷಷ್ಟು ಬೆ೦ಬಲವನ್ನು ಕ೦ಪನಿ ನೀಡಲು ಸಿದ್ಧವಿದೆ ಎ೦ದು ತಿಳಿಸಿದರು.

ನಾಡಿನ ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಕರೆ ಕೊಟ್ಟರು. ಕಾರ್ಯಕ್ರಮದ ನ೦ತರ ಜಯ ಭಾರತ ಜನನಿಯ ತನುಜಾತೆ ನಾಡ ಗೀತೆಯನ್ನು ಹಾಡಲಾಯಿತು. ಈ ಗೀತೆಗೆ ಅಲ್ಲಿ ನೆರೆದಿದ್ದ ಸುಮಾರು ೫೦೦ಕ್ಕೂ ಹೆಚ್ಚು ಮ೦ದಿ, ಎದ್ದು ನಿ೦ತು ಗೌರವ ಸಲ್ಲಿಸಿದರು. ನ೦ತರ ಅಲ್ಲಿ ನೆರದಿದ್ದ ಎಲ್ಲರಿಗೂ ಗೆಳೆಯರ ಬಳಗದವರು ಸಿಹಿ ಹ೦ಚಿದರು.

ಮಧ್ಯಾಹ್ನದ ಊಟವೂ ಅ೦ದು ಸ೦ಪೂರ್ಣ ಕರ್ನಾಟಕದ್ದೇ ಶೈಲಿಯಲ್ಲಿ ಮಾಡಿಸಲಾಗಿತ್ತು. ಹರಿಪ್ರಸಾದ್ ಅವರ ನೇತೃತ್ವದಲ್ಲಿ "ಅಡಿಗ"ರ ತ೦ಡ ಈ ತಯಾರಿ ಮಾಡಿತ್ತು.ಆ ತ೦ಡದ ವೇಷ ಭೂಶಣಗಳೂ ಅ೦ದು ನಮ್ಮ ನಾಡಿನವೇ ಆಗಿದ್ದದ್ದು ವಿಶೇಷ. ಇಡೀ ಕ೦ಪೆನಿಯವರಿಗೆ ಅ೦ದು ಕನ್ನಡದ ಊಟ. ಆ ಸಮಯದಲ್ಲಿ ಕರುನಾಡ ಇತಿಹಾಸದ ದೃಶ್ಯಾವಳಿಯನ್ನು ಬಿತ್ತರಿಸಲಾಯಿತು.ನೋಡಿ ಆನ೦ದಿಸಿದವರು ಎಷ್ಟೋ ಮ೦ದಿ. ಹೊಸದನ್ನು ತಿಳಿದುಕೊ೦ಡ ಸ೦ತೋಷ, ಅಚ್ಚರಿ.

ಹೀಗೆ ಸುಮಾರು ಅರ್ಧ ದಿನದ ಅರ್ಥ ಪೂರ್ಣ ರಾಜ್ಯೋತ್ಸವವನ್ನು SAP Labs India, SAP ಗೆಳೆಯರ ಬಳಗದ ಜೊತೆಗೂಡಿ ಆಚರಿಸಿತು.

ನಮ್ಮ ಬಗ್ಗೆ ಇಲ್ಲಿ ನೋಡಿ:
sap_kannada@yahoogroups.com
http://www.orkut.co.in/Main#Community.aspx?cmm=25345655

ಚಿತ್ರಗಳು:


ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:

Photos : http://picasaweb.google.com/arun.rac/GelayaraBalagaRajyotsava08SLI#

ಧನ್ಯವಾದಗಳು,
SAP ಕನ್ನಡ ಬಳಗ

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Friday, December 5, 2008

ಪ್ರಗತಿ ಸಿಂಡಿಕೇಟ್ ನಾಡಹಬ್ಬ

ಸಂಸ್ಥೆ: ಪ್ರಗತಿ ಸಿಂಡಿಕೇಟ್
ದಿನಾಂಕ: 16/11/2008

ಸಮಾನ ಮನಸ್ಕರ ಸಂಸ್ಥೆಯಾದ ನಮ್ಮ ಪ್ರಗತಿ ಸಿಂಡಿಕೇಟ್ ತನ್ನ ೭ನೆ ಕನ್ನಡ ರಾಜ್ಯೋತ್ಸವವನ್ನು ನಗರದ ತೆಲುಗು ವಿಜ್ಞಾನ ಭವನದ ಶ್ರೀ ಕೃಷ್ಣದೇವರಾಯ ಸಬಾಂಗಣದಲ್ಲಿ ದಿನಾಂಕ ೧೬.೧೧.೨೦೦೮ ರಂದು ಆಚರಿಸಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ. ಕೆ. ಇ .ರಾಧಾಕೃಷ್ಣ, ಮಾಜಿ ಪ್ರಾಂಶುಪಾಲರು, ಶೇಷಾದ್ರಿಪುರಂ ಹಾಗು ಸುರಾನ ಕಾಲೇಜ್, ಶ್ರೀ. ಎಂ.ಬಿ. ರಾಜೇಶ್ ಗೌಡ.ವಿಶೇಷ ಅಪರ ಭೂ ಸ್ವಾಧಿನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಶ್ರೀ ಕರ್ನಲ್ ಈಶ್ವರ್ ಗುರುಲಿಂಗಪ್ಪ ದೊಡ್ಡಮನಿ, ನಿವೃತ್ತ ಭಾರತ ಸೇನಾ ಕರ್ನಲ್ ಬಾಗವಹಿಸಿದ್ದರು.

ಪ್ರತಿ ವರ್ಷದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸಿವುದು ಹಾಗು ಅವರನ್ನು ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವುದು ಪ್ರಗತಿ ಸಿಂಡಿಕೇಟ್ ನ ಧ್ಯೇಯೋದೇಶಗಳಲ್ಲಿ ಒಂದು. ಈ ಸಾಲಿನಲ್ಲಿ ಶ್ರೀಮತಿ. ಎಂ. ಅರ್. ಕಮಲ, ಖ್ಯಾತ ಕವಯತ್ರಿ, ಡಾ: ಕೆ.ಜಗನ್ಮಯ, ಖ್ಯಾತ ವೈದ್ಯರು ಮತ್ತು ಕೆ. ನರಸಿಂಹಮೂರ್ತಿ, ಸಮಾಜ ಸೇವಕರು ಇವರುಗಳಿಗೆ ಕರ್ನಾಟಕ ಸಹೃದಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ. ಕೆ ಪ್ರಹ್ಲಾದ ಶೆಟ್ಟಿ ಇವರಿಗೆ ಪ್ರಗತಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಡಾ: ಲಲಿತ ಭಾಸ್ಕರ್, ಖ್ಯಾತ ವೈದ್ಯರು, ಶ್ರೀಮತಿ ಶಾಂತ ಕುಮಾರಿ, ಖ್ಯಾತ ಸಾಹಿತಿಗಳು, ಶ್ರೀ. ಎಸ್. ರವಿಂದ್ರ, ಭರತ್ ಕಶ್ಯಪ್ ಟ್ರಸ್ಟ್ ,ಶ್ರೀ. ರವಿಶಂಕರ್, ಶ್ರೀ.ಶಂಕರ್ ಭಟ್, ಶ್ರೀ. ಶ್ರೀಕಂಠ ಗುಂಡಪ್ಪ ಆಗಮಿಸಿದ್ದರು.

ರಾಜ್ಯೋತ್ಸವ ಕಾರ್ಯಕ್ರಮದ ಜೊತೆಗೆ ರಕ್ತದಾನ ಶಿಬಿರ ಅಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿ ಸಿಂಡಿಕೇಟ್ ನ ವಿವಿಧ ಶಾಖೆಗಳಾದ ಮತ್ತಿಕೆರೆ , ಮಲ್ಲೇಶ್ವರಂ, ಸಂಜಯನಗರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸಿದ್ದವು. ಮಲ್ಲೇಶ್ವರಂ ತಂಡಕ್ಕೆ ಪ್ರಥಮ ಬಹುಮಾನ,ಸಂಜಯನಗರ ತಂಡಕ್ಕೆ ದ್ವಿತೀಯ ಬಹುಮಾನ ದೊರಕಿದವು.

ಇಡೀ ಕಾರ್ಯಕ್ರಮವು ಶ್ರೀ. ಕೆ.ಜಿ. ಶ್ರೀನಿವಾಸಮೂರ್ತಿ ಹಾಗು ಶ್ರೀ. ಸಿ.ಎನ್.ರಮೇಶ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು

ಚಿತ್ರಗಳು:


ಹೆಚ್ಚಿನ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/loyalvares/PragathiSyndicateKannadaRajyotsava_16Nov08?authkey=x2SBPN9zWFw#

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 3, 2008

ಓರೆಕಲ್ ನಾಡ ಹಬ್ಬ

ಸಂಸ್ಥೆ: ಓರೆಕಲ್ , ಬೆಂಗಳೂರು
ದಿನಾಂಕ: 27 ನವೆಂಬರ್ 2008

ಕರ್ನಾಟಕ ರಾಜ್ಯೋತ್ಸವವನ್ನು ೨೭-ನವಂಬರ್-೨೦೦೮ ರಂದು ಓರೇಕಲ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ ನಡೆಸಿಕೊಟ್ಟ ರಸಸಂಜೆಯು ಸುಮಾರು ೧೫೦ ಜನರನ್ನು ೨ ಗಂಟೆಗಳ ಕಾಲ ರಂಜಿಸಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಪ್ರಾರಂಭಿಸಲಾಯಿತು, ಹಿನ್ನೆಲೆಯಲ್ಲಿ ಮೂಡಿಬಂದ "ಹಚ್ಚೇವು ಕನ್ನಡದದೀಪ" ಸಂದರ್ಭಕ್ಕೆ ತಕ್ಕದಾಗಿತ್ತು.

ಕರ್ನಾಟಕ ಇತಿಹಾಸದ ಹಾಗೂ ಕರ್ನಾಟಕ ಏಕೀಕರಣದ ಸಂಕ್ಷಿಪ್ತ ವಿವರಣೆಯು ಕರ್ನಾಟಕ ರಾಜ್ಯೊತ್ಸವಾಚರಣೆಯ ಔಚಿತ್ಯವನ್ನು ಸಾರಿತು. ಪುಟ್ಟ ಮಗು ಸಂಜನಾಳ "ಕಟ್ಟೇವು ಕಂಕಣವ" ಹಾಡು ಸುಶ್ರಾವ್ಯವಾಗಿತ್ತು. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿನ ಕವಿವಾಣಿಯ ಕಳಕಳಿಯ ಕರೆ ಸಭಿಕರನ್ನು ಆತ್ಮಾವಲೋಕನಕ್ಕೆ ಒರೆಹಚ್ಚಿತು.

"ಆಪಾರಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು", ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ದರಾದರು. ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ, ಪದಬಂಧ, ಕನ್ನಡ ವ್ಯಾಕರಣ, ವ್ಯವಹಾರಿಕ ಕನ್ನಡ, ಕನ್ನಡ ಕೈಬರಹ ಸ್ಪರ್ಧೆಗಳು ಕಂಪನಿಯಲ್ಲಿ ಹಬ್ಬದವಾತಾವರಣ ಸೃಷ್ಟಿಸಿದವು.

ಸಭಿಕರಿಗಾಗೇ ನಡೆಸಿದ "ಥಟ್ಟಂತ ಹೇಳಿ" ರಸಪ್ರಶ್ನಾವಳಿಗಳಿಗೆ, ಮುಗಿಬಿದ್ದು ಉತ್ತರಿಸಿ ಪುಸ್ತಕವನ್ನು ಬಹುಮಾನವಾಗಿ ಪಡೆದರು. "ಚೋಮನದುಡಿ", "ನನ್ನದೇವರು", "ಕೊಳಲು", "ದೇವರು", "೩೦ ದಿನಗಳಲ್ಲಿ ಕನ್ನಡಕಲಿಯಿರಿ" ಹೀಗೆ ಹಲವು ಅಪರೂಪದ ಪುಸ್ತಕಗಳನ್ನು ನೀಡಲಾಯಿತು. ಆಶುಭಾಷಣದ ವಿಷಯಗಳು ಹತ್ತು ಹಲವು ಚರ್ಚೆ ವಿಚರ್ಚೆಗಳಿಗೆ ಗ್ರಾಸವಾಯಿತು. ಸಮಾಜ ಸೇವಕರ ಸಮೀತಿಯ ಸಹಯೊಗದೊಂದಿಗೆ ಕನ್ನಡ ಕಗ್ಗಗಳ "ಟೀ ಶರ್ಟ"ಗಳನ್ನು ನೂರಾರು ನೊಂದಾಯಿತ ಆಸಕ್ತರಿಗೆ ಹಂಚಲಾಯಿತು. ಈ "ಟೀ ಶರ್ಟ"ಗಳನ್ನು ಧರಿಸಿಬಂದ ಉತ್ಸಾಹಿ ಪ್ರೇಕ್ಷಕರಿಂದ ಸಭೆಗೆ ಕಳೆಕಟ್ಟಿತ್ತು. "ಕಾರಂತ", ಕುವೆಂಪು", "ಬೇಂದ್ರೆ", "ಮಾಸ್ತಿ" "ಸುಧಾ ಮೂರ್ತಿ", "ಪೂಚಂತೆ" ಹೀಗೆ ಹಲವು ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಪ್ರರ್ದಶನಕ್ಕೆ ಇಡಲಾಗಿತ್ತು. "ಕುಮಾರ ವ್ಯಾಸ ಮತ್ತು ತಿಮ್ಮಣ್ಣ ಕವಿಯ ಗದುಗಿನ ಭಾರತ", ಅಪರೂಪ ಪುಸ್ತಕಗಳೂ ಪ್ರದರ್ಶನಕಿದ್ದವು. ಈ ಏಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡೇತರರೂ ಉತ್ಸಾಹದಿಂದ ಪಾಲ್ಗೊಂಡರು.

ಅಚ್ಚುಕಟ್ಟಾಗಿ ಆಯೋಜಿಸಿದ ಈ ಸುಂದರ ಸಾಂಸ್ಕ್ರತಿಕ ರಸಸಂಜೆ ಮನೋರಂಜನೆಯೊಂದಿಗೆ, ಕನ್ನಡ, ಕರ್ನಾಟಕದ ಇತಿಹಾಸದ ಬಗ್ಗೆ ಜಾಗ್ರತಿಯುಂಟುಮಾಡಿತು. ಈ ಒಂದು ಪ್ರಯತ್ನ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದ ಬಗ್ಗೆ ಇರುವ ಕಳಕಳಿಯು ಹೆಮ್ಮರವಾಗಿ ಬೆಳೆಯಲಿ ಎಂಬ ಅಶಾ ಭಾವನೆ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮವು ಕರ್ನಾಟಕದ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ" ಹಾಡಿನೊಂದಿಗೆ ಸಮಾರೋಪವಾಯಿತು.


ಚಿತ್ರಗಳು:



ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/nandisha/KarnatakaRajyotsava#

ಧನ್ಯವಾದಗಳು,
ಓರೆಕಲ್ ಕನ್ನಡಿಗರು

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Tuesday, December 2, 2008

ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್ ನಾಡ ಹಬ್ಬ

ಸಂಸ್ಥೆ: ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್, ಬೆಂಗಳೂರು
ದಿನಾಂಕ: 16 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ನಮ್ಮ ಕಚೇರಿ ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್ ನಲ್ಲಿ , ದಿನಾಂಕ ೦೬-೧೧-೨೦೦೮ ರಂದು ಕನ್ನಡ ರಾಜ್ಯೋತ್ಸವ ಆಚರಿಸಿದೆವು. ಮುಂಜಾನೆ ಸರಿಯಾಗಿ ೧೦.೩೦ ಕ್ಕೆ ಭುವನೇಶ್ವರಿ ದೇವಿಯ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯ್ತು. ನಮ್ಮ ಕಛೇರಿಯ ಎಲ್ಲ ಕನ್ನಡಿಗರು ಹಾಗೂ ಕನ್ನಡೇತರರು ಸೇರಿ ನಾಡಗೀತೆಯನ್ನು ಹಾಡುವುದರ ಮೂಲಕ , ಭಾರತಾಂಬೆ ಹಾಗು ಕನ್ನಡ ತಾಯಿಯ ಜೈ ಜೈ ಕಾರದೊಂದಿಗೆ ನಮ್ಮ ನಾಡಹಬ್ಬವನ್ನು ಆಚರಿಸಲಾಯ್ತು.

ನಮ್ಮ ಕನ್ನಡ ಬಳಗ ಹಾಗೂ ಕನ್ನಡೇತರರು ವಿಶೇಷವಾಗಿ ಸಿದ್ಧಪಡಿಸಲಾದ ಟೀ ಶರ್ಟ್ ಗಳನ್ನು ಧರಿಸಿ ಬಂದಿದ್ದು ಒಂದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಪೂಜೆಯ ನಂತರ ನಮ್ಮ ಸಹೋದ್ಯೋಗಿಯೊಬ್ಬರು ಕನ್ನಡ ನಾಡಹಬ್ಬದ ಆಚರಣೆ , ಅವಶ್ಯಕತೆ ಹಾಗೂ ಕನ್ನಡ ಏಕೀಕರಣದ ಬಗ್ಗೆ ಮಾತನಾಡಿದರು.
ನೆರೆದ ಎಲ್ಲ ಜನ ಸಮೂಹಕ್ಕೆ ಫಲ, ಪುಷ್ಪ ಹಾಗೂ ಸಿಹಿ ತಿಂಡಿ ಗಳನ್ನು ಹಂಚಲಾಯ್ತು. ಧಾರವಾಡದ ಪೇಡಾ ಹಾಗೂ ಖಾರ ಬಹು ಜನರ ಮೆಚ್ಚುಗೆಗೆ ಪಾತ್ರವಾಯ್ತು.

ಕೊನೆಯಲ್ಲಿ ನಡೆದ ವಿಶೇಷ ಫೋಟೋ ಸೆಶನ್ ನಮ್ಮ ಕಾರ್ಯಕ್ರಮಕ್ಕೆ ರಂಗು ತಂದಿತು. ಇದು ಅಲ್ಲದೆ , ನಾಡಹಬ್ಬದ ಅಂಗವಾಗಿ ತಯಾರಿಸಲಾದ ವಿಶೇಷ ನಿರೂಪಣೆ ದಿನವಿಡೀ ನಮ್ಮ ಕಛೇರಿಯ ಮುಖ್ಯ ದ್ವಾರದ ಎಲ್ಸಿಡಿ ಪ್ರೊಜೆಕ್ಟರ್ ನಲ್ಲಿ ಬಿತ್ತರಗೊಂಡಿದ್ದು ಮತ್ತೊಂದು ವಿಶೇಷತೆಯಾಗಿತ್ತು.

ಧನ್ಯವಾದಗಳೊಂದಿಗೆ,
ಇನ್ ಟೆಕ್ ಕನ್ನಡ ಬಳಗ

ಚಿತ್ರಗಳು:





ಕಾರ್ಯಕ್ರಮದ ಎಲ್ಲ ಭಾವಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ..

http://picasaweb.google.co.in/rajmtech/KannadaRajyotsavaPart1#

http://picasaweb.google.co.in/rajmtech/KannadaRajyotsavaPart2#

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Monday, December 1, 2008

ಇನಫೋಸಿಸ್ ಮೈಸೂರು ನಾಡ ಹಬ್ಬ



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Sunday, November 30, 2008

ಇನಫೋಸಿಸ್ ಬೆಂಗಳೂರು ನಾಡ ಹಬ್ಬ

ಸಂಸ್ಥೆ: ಇನಫೋಸಿಸ್, ಬೆಂಗಳೂರು
ದಿನಾಂಕ: 13 ನವೆಂಬರ್ 2008

ನಮಸ್ಕಾರ,

ನವೆಂಬರ್ ೧೩ ರಂದು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಾದ ಇನಫೋಸಿಸ್ ಮೊಟ್ಟ ಮೊದಲ ಬಾರಿಗೆ ತನ್ನ ಆವರಣದಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸಿ ಒಂದು ಇತಿಹಾಸ ನಿರ್ಮಿಸಿದೆ. ಅಧ್ಯಕ್ಷತೆ ವಹಿಸಿದ ಶ್ರಿಮತಿ ರಮಾ ಎನ್. ಎಸ್. ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನಫೋಸಿಸ್ ನ "ಶೃತಿ" ತಂಡ ಶಾಸ್ತ್ರೀಯ ಸಂಗೀತದಿಂದ ನೀಡಿದ ಹುರುಪನ್ನು "ಲಯ ತರಂಗ" ತಂಡ ಆಧುನಿಕ ರೀತಿಯಲ್ಲಿ ಅದ್ಭುತವಾಗಿ ನುಡಿಸಿ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಇದಕ್ಕೆ ತಕ್ಕಂತೆ "ಕರ್ನಾಟಕದ ಮಹಿಳೆಯರು" ಮತ್ತು "ಸ್ಟೆಪ್ಸ್" ನೃತ್ಯ ತಂಡಗಳ ಪ್ರದರ್ಶನ ನೆರೆದಿದ್ದ ಜನರನ್ನು ಬೇರೆಯ ಲೋಕಕ್ಕೆ ಕರೆದೊಯ್ಯಿತು.

ಒಂದೂವರೆ ಘಂಟೆ ನಡೆದ ಕಾರ್ಯಕ್ರಮದಲ್ಲಿ ತುಂಬಿದ ಸಭೆಯ ಪ್ರೇಕ್ಷಕರು ತೃಪ್ತಿಯಿಂದ ಇನ್ನೊಂದು ರಾಜ್ಯೋತ್ಸವದ ನಿರೀಕ್ಷೆಯಲ್ಲಿ ತೆರಳಿದರು.

ಚಿತ್ರಗಳು:

ನಿಮ್ಮ,

ಇನ್ಫಿ ಕನ್ನಡಿಗರು


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Saturday, November 29, 2008

ಸಿಮನ್ಸ್ ಸಾಫ್ಟವೇರ್ ನಾಡ ಹಬ್ಬ

ಸಂಸ್ಥೆ: ಸಿಮನ್ಸ್ ಸಾಫ್ಟವೇರ್, ಬೆಂಗಳೂರು
ದಿನಾಂಕ: 14 ನವೆಂಬರ್ 2008

ನಮಸ್ಕಾರ,

ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ. Smiling

ಈ ಸಲ ಹೊಸದಾಗಿ ಮಾಡಿದ್ದರ ಬಗ್ಗೆ ಹೇಳ್ಬೇಕು ಅಂದ್ರೆ.......ನಮ್ಮ ಕನ್ನಡ ಮಹನೀಯರ ಬಗ್ಗೆ ತಿಳಿದುಕೊಳ್ಳುವ/ತಿಳಿಸುವ ಕೆಲಸ! ಮಂತ್ರಾಲೋಚನೆಯಲ್ಲಿ ಕೆಳಗಿನ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಕನ್ನಡ ಮಹನೀಯರ ಒಂದು ದೊಡ್ಡ ಪಟ್ಟಿ ಮಾಡಿದ್ವಿ, ರಾಜ/ರಾಣಿಯರು,ದಾಸರು,ವಚನಗಾರರು,ಸಾಹಿತಿಗಳು,ಕವಿಗಳು(ಹಳ/ನಡು/ಹೊಸಗನ್ನಡದ), ವಿಜ್ಞಾನಿಗಳು,ತಂತ್ರಜ್ಞರು, ಕ್ರೀಡಾಳುಗಳು,ಸಂಗೀತಗಾರರು, ಚಲನಚಿತ್ರಗಾರರು……ಮುಂತಾದವರು. ಆ ಮಹನೀಯರ ಫೋಟೋದೊಂದಿಗೆ, ಅವರ ಕಿರು ಪರಿಚಯ ಮತ್ತು ಸಾಧನೆಗಳ ಬಗ್ಗೆ ಒಂದು ಹಾಳೆಯಷ್ಟು ವಿಚಾರವನ್ನ ಚಿಕ್ಕದಾಗಿ ಚೊಕ್ಕವಾಗಿ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯೋದು/ಸಂಗ್ರಹಿಸೋದು.

ನಾವೆಲ್ಲರೂ ನಮ್ಮ ಮೆಚ್ಚಿನ ಮಹನೀಯರನ್ನ ಆಯ್ಕೆ ಮಾಡ್ಕೊಂಡು ಬರೆದು ಮುಗಿಸಿದ್ವಿ. ನಾನು ಮೊದಲು ಬರೆದದ್ದು ನನ್ನ ನೆಚ್ಚಿನ ಕೆ.ಎಸ್.ನ.ರ ಬಗ್ಗೆ, ನಂತರ ಶಿಶುನಾಳ ಶರೀಫ, ಬಿ.ಎಂ.ಶ್ರೀ, ಮಾಸ್ತಿಯವರ ಬಗ್ಗೆ ಬರೆದೆ.

ಹೀಗೆ ಸಂಗ್ರಹಿಸಿದ ಲೇಖನಗಳನ್ನ ದಿನಕ್ಕೆ ಒಂದರಂತೆ ನವೆಂಬರ್ ತಿಂಗಳಿಡೀ ಕನ್ನಡ ಮಹನೀಯರ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿರೋ ಲೇಖನವನ್ನ ನಮ್ಮಾಫೀಸ್ನಲ್ಲಿರೋವ್ರಿಗೆಲ್ಲಾ (ಸುಮಾರು 4 ಸಾವಿರ ಜನ ಅಂದ್ಕೊಳ್ಳಿ!) ಕಳಿಸೋದು. ಇದಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಬಂದವು. ಕನ್ನಡಿಗರಷ್ಟೇ ಅಲ್ದೆ ಎಲ್ಲರಿಂದಲೂ ಪ್ರತಿಕ್ರಿಯೆ ಬಂದದ್ದು ಕಂಡು ಬಹಳ ನಲಿವಾಯ್ತು.

ಒಂದು ವಿಚಾರ ಮರೀದೆ ಬರೆಯಬೇಕು ಅದೇನಂದ್ರೆ ಈ ಲೇಖನಗಳನ್ನ ಸಂಗ್ರಹಿಸುವಾಗ ನೆರವು ತೆಗೆದುಕೊಂಡದ್ದು ಕನ್ನಡ ವಿಕಿಪೀಡಿಯಾದಿಂದ. ಅಲ್ಲಿ ಬರೆದ ಎಲ್ಲಾ ಲೇಖಕರಿಗೂ ಮತ್ತು ಕನ್ನಡ ವಿಕಿಪೀಡಿಯಾದ ಬೆನ್ನೆಲುಬಾದ ನಮ್ಮ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು.

(ಕಳೆದ ವರ್ಷದ ವಿಚಾರ ಏನಂದ್ರೆ 'ಕನ್ನಡ coffee' ಅಂತ ‘ಕನ್ನಡ ಕಲಿಸುವ ಕ್ಲಾಸ್’ ನಡೆಸಿದ್ದು. ಸುಮಾರು ಸಹೋದ್ಯೋಗಿಗಳು ಕನ್ನಡ ಮಾತಾಡೋದನ್ನ ಕಲಿತದ್ದು ಸಂತಸದ ವಿಚಾರ. Smiling )

ನವೆಂಬರ್ ಮೊದಲ ವಾರದಿಂದ ಯೋಜನೆಯಂತೆ ಎಲ್ಲಾ ಸ್ಪರ್ಧೆಗಳು ಸಾಂಗವಾಗಿ ನಡೆದವು. ಸ್ಪರ್ಧೆಗಳಲ್ಲಿ,

  1. ಶತ ಪ್ರತಿಶತ ಕನ್ನಡ - ಇದು ಒಂದು ನಿಮಿಷದ ಸ್ಪರ್ಧೆ. ಪ್ರಶ್ನೆಗಳನ್ನ ಕನ್ನಡ/ಇಂಗ್ಲೀಷ್/ಕಂಗ್ಲೀಷ್ನಲ್ಲಿ ಕೇಳಲಾಗುತ್ತೆ….ಆದ್ರೆ ಉತ್ತರ ಮಾತ್ರ ಪೂರ್ತಿ ಕನ್ನಡದಲ್ಲೆ ಹೇಳ್ಬೇಕು Laughing out loud ಸಕತ್ ಮಜಾ ಇತ್ತು!
  2. ಕವನ, ಹನಿಗವನ, ಚುಟುಕ ಸ್ಪರ್ಧೆ
  3. ಚುಕ್ಕಿ ಚಿತ್ತಾರ - ರಂಗೋಲೆ ಸ್ಪರ್ಧೆ
  4. ಬರವಣಿಗೆ - ಕನ್ನಡ/ಕರ್ನಾಟಕದ ಬಗ್ಗೆ ಕೊಡುವ ಚಿತ್ರಪಟದ ಬಗ್ಗೆ ಒಂದು ನಿಮಿಷದಲ್ಲಿ ಲೇಖನ ಬರೆಯುವುದು.
  5. ಕನ್ನಡ ಮಹನೀಯರ ಚಿತ್ರ, ಪರಿಸರದ ಚಿತ್ರ, ವ್ಯಂಗ್ಯ ಚಿತ್ರ ಬಿಡಿಸುವ ಸ್ಪರ್ಧೆ

ಇನ್ನು ಕಾರ್ಯಕ್ರಮದ ದಿನ 14 ನವೆಂಬರ್ 2008ರ ಬಗ್ಗೆ ಹೇಳ್ಬೇಕು ಅಂದ್ರೆ ಒಂಥರಾ ಹಬ್ಬದ ವಾತಾವರಣ. ರಂಗೊಲೆ,ಮಾವಿನ ತೋರಣದಿಂದ ಅಲಂಕೃತಗೊಂಡ ಸಭಾಂಗಣ ನಮ್ಮೆಲ್ಲರ ಸಡಗರವನ್ನ ಹಿಮ್ಮಡಿಗೊಳಿಸುತ್ತಿತ್ತು. ದ್ವಾರದಲ್ಲೇ ಕರ್ನಾಟಕದ ನಕಾಶೆಯನ್ನ ಬಣ್ಣಗಳಿಂದ ಬಿಡಿಸಿದ್ದರು. ಎಲ್ಲಾ ಹೆಣ್ಮಕ್ಕಳು ರೇಷ್ಮೆ ಸೀರೆಯಲ್ಲಿದ್ದರೆ ಗಂಡುಮಕ್ಕಳು ಅಂಗಿ,ಪಂಚೆ ಶಲ್ಯದಲ್ಲಿದ್ದರು. ಕಾರ್ಯಕ್ರಮ ಶುರುವಾಗೋ ಹೊತ್ತಿಗೆ ಸಭಾಂಗಣ ಪೂರ್ತಿ ತುಂಬಿ ತುಳುಕುತ್ತಿತ್ತು.

ನಡೆದ ಕಾರ್ಯಕ್ರಮಗಳು ಹೀಗಿದ್ದವು:

  1. 'ತಾಯೆ ಶಾರದೆ ಲೋಕ ಪೂಜಿತೆ' ಪ್ರಾರ್ಥನೆಯಿಂದ ಶುರುವಾದದ್ದು,
  2. 'ಹಚ್ಚೇವು ಕನ್ನಡದ ದೀಪಾ' ನೃತ್ಯ
  3. 'ತಾಯೆ ಬಾರಾ ಮೊಗವ ತೋರ' ಹಾಡು.
  4. ಹಳೆ ಕನ್ನಡ ಚಲನಚಿತ್ರದ ಹಾಡುಗಳಿಗೆ ನೃತ್ಯ.
  5. ಹುಡುಗರು ಮತ್ತು ಮೇಷ್ಟ್ರ ಇಸ್ಕೂಲಿನ ಕಿರು ಹಾಸ್ಯ ನಾಟಕ.
  6. ಕೈಲಾಸಕ್ಕೂ recession ತಪ್ಪಿದ್ದಲ್ಲ ಅನ್ನೋ ಒಂದು ಕಿರು ಹಾಸ್ಯ ನಾಟಕ… Laughing out loud Laughing out loud
  7. ನಮ್ಮಾಫೀಸಿನ 'ಬೀಚಿ' ಅಂತಲೇ ಪ್ರಸಿದ್ದಿಯಾಗಿರುವ ರಾಘವೇಂದ್ರರಿಂದ ಹಾಸ್ಯ ಭಾಷಣ. ಅದೆಷ್ಟು ನಕ್ಕಿದ್ದು ಅಂತೀರಿ...ಚಪ್ಪಾಳೆ ಮೇಲೆ ಚೆಪ್ಪಾಳೆ Laughing out loud

ಚಿತ್ರಕಲೆ ಪ್ರದರ್ಶನ ಇತ್ತು. ಅಲ್ಲಿ ನನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆ ಚಿತ್ರ ಕೂಡ ಇತ್ತು Smiling

ಮೂರು ದಿನಗಳವರೆಗೆ ಟೋಟಲ್ ಕನ್ನಡ ಡಾಟ್ ಕಾಂ ಅವರ ಕನ್ನಡ ಪುಸ್ತಕಗಳು,T ಅಂಗಿ,ಹಾಡು,ಚಲನ ಚಿತ್ರಗಳ ಸಿಡಿ/ಡಿವಿಡಿಗಳ ಮಾರಾಟ ಮಳಿಗೆ ಇಟ್ಟಿದ್ರು. ಇಷ್ಟೆಲ್ಲಾ ಓದಿದ ಮೇಲೆ ನಿಮ್ಮಲ್ಲಿ ಕೆಲವು ಪ್ರಶ್ನೆಗಳು ಕಾಡಿರಬಹುದು.ಉತ್ತರಗಳನ್ನ ಮೊದಲೇ ತಿಳಿಸುವೆ. ಇಲ್ಲ ಬಹಳ ವರ್ಷಗಳಿಂದ ಅಲ್ಲ…ಕನ್ನಡ ರಾಜ್ಯೋತ್ಸವದ ಆಚರಣೆಯನ್ನ ಮೂರು ವರ್ಷಗಳ ಹಿಂದೆ ಅಷ್ಟೆ ಶುರು ಮಾಡಿದ್ದು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಮತ್ತು ಯುಗಾದಿ ಹಬ್ಬಕ್ಕೊಂದು ಕನ್ನಡದ ನಾಟಕ ಇವೆರಡನ್ನ ಮಾತ್ರ ವಿಶೇಷವಾಗಿ ಆಚರಿಸಲಾಗತ್ತೆ. ಸ್ಪರ್ಧೆಗಳನ್ನ ಆಫೀಸ್ ಕೆಲಸದ ಸಮಯ ಮುಗಿದ ನಂತರವೇ ನಡೆಸಿದ್ದು.

ಇಷ್ಟೆಲ್ಲಾ ಕಾರ್ಯಕ್ರಮ ನಡೆಸೋದಕ್ಕೆ ಬೇಕಾದ ಹಣ...ಎಲ್ಲಾ ಸಹೃದಯ ಸಹೋದ್ಯೋಗಿಗಳ ಇಚ್ಛೆಯಂತೆ ನೀಡಿದ ದೇಣಿಗೆಯ ರೂಪದಲ್ಲಿ ಬಂದದ್ದು. ಕನ್ನಡಿಗ,ತಮಿಳ,ಹಿಂದಿ,ತೆಲುಗ,ಮಲೆಯಾಳಿ ಅನ್ನೋ ಭಾವವೇನೂ ಇರಲಿಲ್ಲ! ಹತ್ತಿರ ಹತ್ತಿರ ಒಂದು ಲಕ್ಷ ರೂಪಾಯಿಗಳು ಸಂಗ್ರಹವಾಯ್ತು...ಕಾರ್ಯಕ್ರಮಕ್ಕೆ ಮಿತವಾಗಿ ಖರ್ಚು ಮಾಡಿ ಉಳಿದಷ್ಟು ಹಣವನ್ನ ಇತ್ತೀಚೆಗೆ ರಸ್ತೆ ಅಫಘಾತದಲ್ಲಿ ದುರ್ಮರಣ ಹೊಂದಿದ ನಮ್ಮ ಸಹೋದ್ಯೋಗಿಯ ಕುಟುಂಬಕ್ಕೆ ನೀಡಿದೆವು.

ಆಫೀಸಿನ ಮ್ಯಾನೇಜ್ಮೆಂಟ್ ನವೆಂಬರ್ ತಿಂಗಳಿನ 14ನೇ ತಾರೀಖಿನ ಮಧ್ಯಾಹ್ನದ ಎರಡು ಗಂಟೆಗಳಷ್ಟು ಕಾಲವನ್ನ ಎಲ್ಲಾ ಸಹೋದ್ಯೋಗಿಗಳೂ ಕಾರ್ಯಕ್ರಮದಲ್ಲಿ (ಆಯೋಜಿಸಲು) ಭಾಗವಹಿಸಲು ….ಅನುಮತಿ/ಅನುಕೂಲ ಮಾಡಿಕೊಟ್ಟಿದ್ದರು. ಅದಕ್ಕೆ ನಾವುಗಳು ಋಣಿ.

ಧನ್ಯವಾದಗಳು.

-ಸಿಮನ್ಸ್ ಕನ್ನಡಿಗರು

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸಿಂಫೋನಿ ಸರ್ವಿಸಸ್ ನಲ್ಲಿ ನಾಡ ಹಬ್ಬ

ಸಂಸ್ಥೆ: ಸಿಂಫೋನಿ ಸರ್ವಿಸಸ್, ಬೆಂಗಳೂರು
ದಿನಾಂಕ: 6 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ದಿನಾಂಕ 06/11/2008 ರಂದು, ನಾವು ನಮ್ಮ ಸಿಂಫೋನಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಿದೆವು. ಆ ದಿನ ಬೆಳಗ್ಗೆ 9:45 ಕ್ಕೆ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಗಿ, ತದನಂತರ ಕಛೇರಿಯ ಆವರಣದಲ್ಲಿ ಡೊಳ್ಳು ಕುಣಿತವನ್ನ ಏರ್ಪಡಿಸಲಾಗಿತ್ತು. ನಂತರ ಸಂಜೆ ಸಾಂಸ್ಕ್ರುತಿಕ ಕಾರ್ಯಕ್ರಮವಿತ್ತು.

ಡೊಳ್ಳು ಕುಣಿತಕ್ಕೆ ಕಛೇರಿಯ ಎಲ್ಲರಿಂದಲೂ ( ಕನ್ನಡಿಗರಲ್ಲದವರಿಂದಲೂ) ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದು, ರಾಜ್ಯೋತ್ಸವಾಚರಣೆ ತುಂಬಾ ಯಶಸ್ವಿಯಾಯಿತು. ಈ ಒಂದು ಯಶಸ್ವಿ ಕಾರ್ಯಕ್ರಮವನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯ ಫಲವಾಗಿ ಈ ಮಿಂಚೆ.

ರಾಜ್ಯೋತ್ಸವಾಚರಣೆ ಕುರಿತು ನಮ್ಮ ಕಛೇರಿಯ ಮುಖ್ಯಸ್ಥರಿಂದ(President, India Operations) ಬಂದ ಪ್ರತಿಕ್ರಿಯೆ:
Dear Colleagues,
Comes November month, people of Karnataka are in a joyous mood to celebrate the Karnataka Raajyotsava. In the month of November every year, the people of Karnataka commemorate the formation of state with several activities like, cultural, literary and folk dance which showcase the rich culture and heritage of Karnataka.

Today morning, I was overwhelmed with joy to see the celebrations arranged by our young Kannada colleagues starting with lighting the lamp , to the "Dollu Kunitha" dance. I am sure the rest of the events in the day will be as interesting and absorbing.

Karnataka have contributed immensely to the India's rich folkloric tradition also. It has the folk dances like: Yakshagaana, Veeragaase, Dollu Kunitha, Kamsaale Kunitha and others. Dollu Kunitha is a popular drum dance, which we enjoyed very much!. The large drums are decorated with colored cloth, and are slung around the necks of men. The dances are at times accompanied with songs relating to religious praise or wars. It spoke volumes of the rich traditions of India. I come from Bengal , which is also extremely rich in culture and traditions. I enjoyed every bit of the dance celebrations!

Karnataka's contribution to music is unparalleled. It developed a school of music that is called Karnatic School. Carnatic music spread all over south India and it is one of the two dominant musical styles in India. To top it all, Pandit Bhim Sen Joshi, one of the sons of the soil of Karnataka has been awarded the BHARAT RATNA award, something I am sure all Indians will feel proud of!

Karnataka has contributed in a great way for the rich monumental heritage of India in the form of Hampi, Pattadakallu, Badami, Beluru, Halebidu and others. Among these, Hampi and Pattadakallu are listed in the World Heritage Centers of UNESCO.

For the last 2.5 years I have adopted Bangalore and Karnataka as my adopted home. My children are now studying in Bangalore. My wife and me , along with our family, are liking and enjoying the rich traditions of Karnataka. Over the next year, we do hope to go around an savor this beautiful state.

I take this opportunity to salute this great tradition and culture and wish all Symphonians great times!

With Regards,
Amitava

ವಂದನೆಗಳು,
ಸಿಂಫೋನಿ ಕನ್ನಡಿಗರು

ಚಿತ್ರಗಳು:



ಹೆಚ್ಚಿನ ಚಿತ್ರಗಳಿಗೆ, ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ:
http://picasaweb.google.co.in/rudresha.hk/KarnatakaRaajyotsavaSymphonyServices?authkey=9I2YNm4b9gc#



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ನೆಸ್ ಟೆಕ್ನಾಲಜಿಸ್ ನಾಡ ಹಬ್ಬ

ಸಂಸ್ಥೆ: ನೆಸ್ ಟೆಕ್ನಾಲಜಿಸ್, ಬೆಂಗಳೂರು
ದಿನಾಂಕ: ೮ ನವೆಂಬರ್ ೨೦೦೮

Namaskara,

A beautiful stage was arranged having a dias for people to perform, and a PPT depicting famous places and people from Karnataka. The whole of terrace was decorated with Kannad Bhavuta.

For lunch and snacks, we had ordered Kannada style food It started with kannada song, Hachevu Kannadada deepa, followed by Lighting of Jyothi , and speach by one of the senior level executive.

Then later on followed by many cultural programmes like, Skit, Fashion Show, Haadugalu, Kolalu Vaadana, Mimicry.... ella kannadadalli.

This function witnessed around 500 people, watching all the programmes till the end. It lasted for around 2.5 - 3 hours.

People behind the event:
Babu Narendra
Naveen Kumar from HR
Raghavendra from HR
Hemath Karuna

ಧನ್ಯವಾದಗಳು,
ನೆಸ್ ಕನ್ನಡಿಗರು

ಚಿತ್ರಗಳು:










ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸಿಸ್ಕೊ ಸಿಸ್ಟಮ್ಸ್ ನಲ್ಲಿ ನಾಡ ಹಬ್ಬ

ಸಂಸ್ಥೆ: ಸಿಸ್ಕೊ ಸಿಸ್ಟಮ್ಸ್, ಬೆಂಗಳೂರು
ದಿನಾಂಕ: 14 ನವೆಂಬರ್ 2008

ನಮಸ್ಕಾರ,

ಸಂಭ್ರಮ,,, ಈ ಹೆಸರಲ್ಲಿಯೇ ಸಂತಸದ ಹೊಳೆ, ಹಬ್ಬದ ಕಳೆ ಇದೆ. ಸಿಸ್ಕೊ ಕಂಪನಿಯ ಕನ್ನಡ ಬಳಗ "ಸಂಭ್ರಮ" ಕಳೆದ ಶುಕ್ರವಾರ, ೧೪/೧೧/೨೦೦೮, ರಂದು ಅದ್ದೂರಿಯಾಗಿ ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಸಿಸ್ಕೊ ಕಂಪನಿಯ ಎಲ್ಲ ಕಚೇರಿಗಳು ಮದುಮಗಳಂತೆ ಅಲಂಕೃತಗೊಂಡಿದ್ದವು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದವರು ಹಿರಿಯ ಸಾಹಿತಿಗಳಾದ ಶ್ರೀ ಸಾ. ಶಿ.ಮರುಳಯ್ಯನವರು. ಎಷ್ಟು ಹಿರಿಯ ಸಾಹಿತಿಯೋ ಅಷ್ಟೇ ಸಹೃದಯಿ, ಬಿಚ್ಚು ಮನಸ್ಸಿನ ನುಡಿಯವರು. ಸಿಸ್ಕೊ ಕನ್ನಡಿಗರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹಬ್ಬಕ್ಕೆ ಇನ್ನಷ್ಟು ಮೆರುಗು ತಂದರು. ಸಮಾರಂಭದ ಮತ್ತೊಂದು ಆಕರ್ಷಣೆಯಂದರೆ, ಸಿಸ್ಕೋ ಸಂಸ್ಥೆಯ ಆಡಳಿತಾಧಿಕಾರಿ (ಭಾರತ), ಅರವಿಂದ್ ಸೀತಾರಾಮನ್ ರವರು ಆಗಮಿಸಿದ್ದು. ಅರವಿಂದ್ ಸೀತಾರಾಮನ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಭವ್ಯ ಪರಂಪರೆಯ ಬಗ್ಗೆ ತಮಗಿರುವ ಅಪಾರ ಗೌರವವನ್ನು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದರು.ಅಷ್ಟೇ ಅಲ್ಲದೇ, ಕರ್ನಾಟಕವನ್ನು ಆಳಿದ ಬೇರೆ ಬೇರೆ ಸಾಮ್ರಾಜ್ಯಗಳ ಬಗ್ಗೆ ನೆರೆದಿದ್ದ ಸಭಿಕರಿಗೆ ಪ್ರಶ್ನೆಗಳನ್ನು ಕೇಳಿ ಕರ್ನಾಟಕಕ್ಕಿರುವ ಭವ್ಯ ಇತಿಹಾಸವನ್ನು, ಅದನ್ನು ನಾವೆಲ್ಲರೂ ತಿಳಿಯಬೇಕಾದ ಅಗತ್ಯವನ್ನು ನೆರೆದಿದ್ದ ಎಲ್ಲರ ಮನದಲ್ಲಿ ತುಂಬುವಲ್ಲಿ ಯಶಸ್ವಿಯಾದರು. ಸಿಸ್ಕೊ ಕಂಪನಿಯಲ್ಲಿ , ಈ ಕನ್ನಡ ಹಬ್ಬ ಪ್ರತಿ ವರ್ಷ ತಪ್ಪದೇ ನಡೆಯಬೇಕು, ಅದಕ್ಕೆ ಬೇಕಾಗುವ ಎಲ್ಲ ಆರ್ಥಿಕ ನೆರವನ್ನು ತಾವು ನೀಡುವುದಾಗಿ ಘೋಷಿಸಿದ ಅವರ ಮಾತಿಗೆ ನೆರೆದ ಜನ ಸಿಳ್ಳೆ ಚಪ್ಪಾಳೆಯ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.

ರತ್ನನ ಪದಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನೆಲೆಸಿರುವ, ನಾಯಿ ಮರಿ ನಾಯಿ ತಿಂಡಿ ಬೇಕೇ? ಮುಂತಾದ ಹಲವಾರು ಸರಳ ಪದಗಳ ಮೂಲಕ ಚಿಣ್ಣರ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ಕೊಟ್ಟ ಕನ್ನಡದ ಖ್ಯಾತ ಸಾಹಿತಿ ಜಿ. ಪಿ. ರಾಜರತ್ನಂರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸಮಾರಂಭದ ವೇದಿಕೆಯನ್ನು ಜಿ. ಪಿ. ರಾಜರತ್ನಂ ವೇದಿಕೆ ಎಂದು ನಾಮಕರಣ ಮಾಡಿ ಕಾರ್ಯಕ್ರಮವನ್ನು ಅವರಿಗೆ ಅರ್ಪಿಸಲಾಯಿತು. ಸಿಸ್ಕೊ ಕನ್ನಡಿಗರು ಪ್ರಸ್ತುತ ಪಡಿಸಿದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು. ಸಂಭ್ರಮ ತಂಡ ನಡೆಸಿದ ರತ್ನನ ಪದಗಳನ್ನೇ ಆದರಿಸಿದ ಕಿರು ನಾಟಕ ವಿಶೇಷ ಮನ್ನೆಣೆಗೆ ಪಾತ್ರವಾಯಿತು. ಕನ್ನಡ ಸಾಹಿತ್ಯವನ್ನು ಪೋಷಿಸುವ ಧ್ಯೇಯದೊಂದಿಗೆ, ರಸ ಪ್ರಶ್ನೆ ವಿಜೇತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ ಎರಡು ಪುಸ್ತಕ ಮಾಲಿಕೆಗಳನ್ನು ಕಾಣಿಕೆಯಾಗಿ ನೀಡಿದರು.

ಈ ನೆಲದ ಋಣ ಐ.ಟಿ ಕನ್ನಡಿಗನ ಮೇಲಿದೆ, ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾ, ಮಾಧ್ಯಮವನ್ನು ಆತ ಬಳಸಬೇಕು, ಬೆಳೆಸಬೇಕು, ಎಲ್ಲೇ ಹೋದರೂ ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯಬಾರದು, ಇಷ್ಟಾದರೇ ಕರ್ನಾಟಕದ ಹೃದಯವಾದ ಬೆಂಗಳೂರಿನಲ್ಲಿ ಕನ್ನಡವನ್ನು ಅಳಿಸಲು ಯಾರಿಂದಲೂ ಆಗದು ಎನ್ನುವ ಸಂಭ್ರಮ ತಂಡದ ಹರೀಶಾ ಅವರ ಮಾತು ಸಭಿಕರನ್ನು ಚಿಂತನೆಗೆ ಹಚ್ಚಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಕರ್ನಾಟಕದ ಬೇರೆ ಬೇರೆ ಭಾಗದ ವಿಶೇಷವನ್ನೊಳಗೊಂಡ ಭರ್ಜರಿ ಊಟ ಬಡಿಸಲಾಯಿತು. ತಮ್ಮ ಇಳಿ ವಯಸ್ಸಲ್ಲೂ, ಸಮಾರಂಭದ ಕೊನೆಯವರೆಗೂ ಹಾಜರಿದ್ದು, ಎಲ್ಲರೊಡನೆ ಬೆರೆತ ಸಾ.ಶಿಯವರು ನೆರೆದಿದ್ದ ಸಭಿಕರ ಗೌರವಕ್ಕೆ ಪಾತ್ರರಾದರು.

ವಂದನೆಗಳು,

ಸಿಸ್ಕೊ ಕನ್ನಡಿಗರು

ಚಿತ್ರಗಳು:


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Friday, November 28, 2008

ವೇಲಂಕಣಿ ಸಾಫ್ಟವೇರ್ ನಲ್ಲಿ ನಾಡ ಹಬ್ಬ

ಸಂಸ್ಥೆ: ವೇಲಂಕಣಿ ಸಾಫ್ಟವೇರ್ಸ್, ಬೆಂಗಳೂರು
ದಿನಾಂಕ: 8 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ನಮ್ಮ ’ವೇಲಂಕಣಿ’ ಸಂಸ್ಥೆಯಲ್ಲಿ ನವಂಬರ್ ೮ ೨೦೦೮ ರಂದು ’ಕನ್ನಡ ರಾಜ್ಯೋತ್ಸವವನ್ನು’ ಉತ್ಸಾಹದಿಂದ ಆಚರಿಸಿದೆವು. ನಾನು ಈ ಸಂಸ್ಥೆ ಸೇರಿದಾಗಿನಿಂದ ಇದು ಎರಡನೆ ಕನ್ನಡ ರಾಜ್ಯೋತ್ಸವ. ದಿನಗಳು ಹೇಗೆ ಕಳೆಯುತ್ತಿವೆ ಅಂತ ಆಶ್ಚರ್ಯ ಆಗುತ್ತೆ. ನಿನ್ನೆ ಮೊನ್ನೆ ಅಷ್ಟೆ ನಾವು ಮೊದಲನೆ ರಾಜ್ಯೋತ್ಸವ ಮಾಡಿದೆವು ಅಂತ ಅನಿಸ್ತಿದೆ :) ಈ ಬಾರಿ ನಮ್ಮ ಮಾನವ ಸಂಪನ್ಮೂಲ ಇಲಾಖೆಯ ಸಹೋದ್ಯೋಗಿಗಳು ರಾಜ್ಯೋತ್ಸವವನ್ನು ಆಚರಿಸಲು ಅವರಾಗಿಯೇ ಮುಂದೆ ಬಂದು, ನಮಗೆ ಆ ದಿನ ನಡೆಯುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಮ್ಮ ಸಹೋದ್ಯೋಗಿಗಳ ಉತ್ಸಾಹವು ಕೊಂಚ ಜಾಸ್ತಿಯೇ ಇತ್ತು ಅಂತ ಹೇಳ್ಬೇಕು. ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ಧರಿಸಿದ್ದ ಸಾಂಪ್ರದಾಯಿಕ ತೊಡಿಗೆಗಳಿಂದ ಅದು ಸ್ಪಷ್ಟವಾಗಿತ್ತು :)

ಅಂದು ನಾವೆಲ್ಲರೂ ನಮ್ಮ ಸಂಸ್ಥೆಯ ಪಕ್ಕದ ಒಂದು ಸ್ಥಳದಲ್ಲಿ ಸರಿಯಾಗಿ ಸಂಜೆ ೪ ಘಂಟೆಗೆ ಸೇರಿದೆವು. ಕಾರ್ಯಕ್ರಮದ ನಿರೂಪಕರು ನಮ್ಮನ್ನೆಲ್ಲ ಸ್ವಾಗತಿಸುತ್ತ ನೆರೆದಿದ್ದ ಜನರನ್ನು ೨ ಸಾಲಿನಲ್ಲಿ ನಿಲ್ಲಿಸಿ ನಮ್ಮ ಸಂಸ್ಥೆಯ ಮುಂಭಾಗದಲ್ಲಿರುವ ಧ್ವಜಾರಾಹೋಣದ ಸ್ಥಳಕ್ಕೆ ಹೋಗಲು ಹೇಳಿದರು. ನಾವೆಲ್ಲ’ಸಿರಿಗನ್ನಡಮ್ ಗೆಲ್ಗೆ, ಸಿರಿಗನ್ನಡಮ್ ಬಾಳ್ಗೆ, ಜಯ ಕರ್ನಾಟಕ’ ಅಂತ ಘೋಷಗಳನ್ನು ಕೂಗುತ್ತ ಕನ್ನಡ/ಕರ್ನಾಟಕದ ಬಗ್ಗೆ ಬರೆದಿರುವ ಹಾಡುಗಳನ್ನು ಹಾಡುತ್ತ ನಡೆದೆವು.

ಕಾರ್ಯಕ್ರಮವು ವಿಘ್ನವಿನಾಶಕ ಗಣೇಶನ ಸ್ತುತಿಯಿಂದ ಶುರುವಾಯಿತು. ಅನಂತರ ನಿರೂಪಕರು ಕರ್ನಾಟಕದ ಉಗಮ, ರಾಜ್ಯೋತ್ಸವದ ಹಿನ್ನೆಲೆ, ’ಕರ್ನಾಟಕ’ ಎನ್ನುವ ಹೆಸರಿನ ಮತ್ತು ಹಳದಿ-ಕೆಂಪು ಬಣ್ಣದ ಧ್ವಜದ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ನೆರೆದಿದ್ದವರಿಗೆ ಇಂಗ್ಲೀಷಿನಲ್ಲಿ ತಿಳಿಸಿದರು. ನಿರೂಪಣೆಯ ಈ ಭಾಗ ಮಾತ್ರ ಆಂಗ್ಲ ಭಾಷೆಯಲ್ಲಿತ್ತು.

ತದನಂತರ ಕನ್ನಡದವರೇ ಆದ ನಮ್ಮ ಹಿರಿಯ ತಾಂತ್ರಿಕ ನಿರ್ದೇಶಕರೊಬ್ಬರು ಧ್ವಜಾರೋಹಣ ಮಾಡಿದರು. ಅವರು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಜುಬ್ಬಾ ಧರಿಸಿ ಬಂದಿದ್ದು ನಮಗೆಲ್ಲಾ ಅಚ್ಚರಿ ಮತ್ತು ಸಂತೋಷವನ್ನು ತಂದಿತ್ತು :) ೧೫ ನಿಮಿಷ ಮಾತಾಡಿದ ಅವರು ಕರ್ನಾಟಕ,ಕನ್ನಡ ಸಂಸ್ಕೃತಿ,ಕನ್ನಡಿಗರ ಸತ್ಕಾರ ಗುಣ ಹಾಗು ವಿಶಾಲ ಮನೋಭಾವ, ಕನ್ನಡ ಮಾತಾಡುವ ವಿಭಿನ್ನ ಶೈಲಿಗಳು ( ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ಹವ್ಯಕ ಕನ್ನಡ ಇತ್ಯಾದಿ ),ಕರ್ನಾಟಕ ಸಂಗೀತ, ಕೈಗಾರಿಕೆ ಹಾಗು ವಿವಿಧ ಕ್ಷೇತ್ರದಲ್ಲಿ ಭಾರತಕ್ಕೆ ಕನ್ನಡಿಗರ ಕೊಡುಗೆಗಳ ಬಗ್ಗೆ ಮಾತಾಡಿದರು. ಬೇರೆ ರಾಜ್ಯದಿಂದ ಇಲ್ಲಿಗೆ ಬಂದ ಜನರಿಗೆ ಕನ್ನಡ ಕಲಿಯಲು ಆಗ್ರಹಿಸಿದರು. ಕರ್ನಾಟಕವು ಒಂದು ರೀತಿ ವಿವಿಧ ಜಗತ್ತುಗಳು ಸಂಧಿಸುವ ತಾಣವಾಗಿದೆ ಮತ್ತು ಕರ್ನಾಟಕವು ಹವಾಗುಣ,ನೈಸರ್ಗಿಕ ಸಂಪನ್ಮೂಲಗಳು, ಔದ್ಯೋಗಿಕ ಅವಕಾಶಗಳು, ಸಾಮರಸ್ಯ ಇವೆ ಮುಂತಾದ ಅನುಕೂಲಗಳನ್ನು ಇಲ್ಲಿರುವವರಿಗೆ ಮತ್ತು ಕೆಲಸವನ್ನಿ ಅರಸಿ ಬರುವವರಿಗೆ ನೀಡುತ್ತದೆ. ಆದ್ದರಿಂದ ಇಲ್ಲಿ ನೆಲೆಸುವವರೆಲ್ಲರೂ ರಾಜ್ಯೋತ್ಸವದಂತ ದಿನಗಳನ್ನು ಆಚರಿಸಿ, ಆಚರಣೆಗಳಲ್ಲಿ ಪಾಲ್ಗೊಂಡು ಈ ರಾಜ್ಯಕ್ಕೆ ಒಂದು ವಿಧದಲ್ಲಿ ಕೃತಜ್ಙತೆಯನ್ನು ಸಲ್ಲಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ, ಇಷ್ಟೆಲ್ಲಾ ಅನುಕೂಲಗಳನ್ನು ಒದಗಿಸುತ್ತಿರುವ ಈ ರಾಜ್ಯದಲ್ಲಿ ನೆಲೆಸಿರುವ ನಮಗೆಲ್ಲರಿಗೂ ಈ ಸ್ಥಳವನ್ನು, ಕನ್ನಡ ಭಾಷೆಯನ್ನು ಗೌರವಿಸಿ ಪೂಜಿಸುವುದು ನಮ್ಮ ಭಾಗ್ಯವೇ ಆದ್ದರಿಂದ ಬೇರೆಯವರು ತಾವು ಹೊರಗಿನವರು ಅಂತಂದುಕೊಳ್ಳದೆ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಮತ್ತು ಸಾಧ್ಯವಾದರೆ ಈ ಸಂಸ್ಕೃತಿಗೆ ಈ ರಾಜ್ಯಕ್ಕೆ ಒಳ್ಳೆಯ ರೀತಿಯಲ್ಲಿ ಕೊಡುಗೆ ನೀಡಬೇಕು ಅಂತ ಹೇಳಿದರು. ತಮ್ಮ ಭಾಷಣದ ಕೊನೆಗೆ ’ಜೈ ಕರ್ನಾಟಕ’ ಎಂದು ೩ ಬಾರಿ ಹೇಳಿ ನಾವೆಲ್ಲರು ಅವರೊಟ್ಟಿಗೆ ಹೇಳುವಂತೆ ಮಾಡಿದರು.

ಇದಾದನಂತರ ವೇದಿಕೆ ನಮ್ಮದಾಯಿತು :) ೧೫-೨೦ ಸದಸ್ಯರಿದ್ದ ನಾವು ನಾಡಗೀತೆಯಾದ ಕು.ವೆಂ.ಪು ರವರ ’ಜಯ ಭಾರತ ಜನನಿಯ ತನುಜಾತೆ’ಯನ್ನು ಹಾಡಿದೆವು. ಗಾಯನದಲ್ಲಿ ಭಾಗವಹಿಸಿದವರೆಲ್ಲರೂ ನಾಡಗೀತೆ ಚೆನ್ನಾಗಿ ಬರಲು ಶಕ್ತಿ ಮೀರಿ ಪ್ರಯತ್ನಿಸಿದರು.ಹಾಡುವಾಗ ನಮ್ಮ ಸ್ನೇಹಿತರು ತೋರಿದ ಹೊಂದಾಣಿಕೆ ಮರೆಯಲಾರದಂತದು. ಏಕೆಂದರೆ ನಾವು ಅವತ್ತು ಕಾರ್ಯಕ್ರಮ ಶುರುವಾಗಲು ೩ ತಾಸು ಇದ್ದಾಗ ಮಾತ್ರ ಅಭ್ಯಾಸ ಮಾಡಿದ್ದೆವು. ಹಾಡುವ ರಾಗ, ಏರಿಳಿತಗಳು ಸರಿಯಾಗಿ ಬರುವಲ್ಲಿ ಯೂಟ್ಯೂಬ್ ನಲ್ಲಿ ನಮಗೆ ದೊರೆತ ನಾಡಗೀತೆಯ ದೃಶ್ಯಮುದ್ರಣದ ತುಣುಕು ಭಾರಿ ಸಹಾಯ ಮಾಡಿತು.

ನಂತರ ನಮ್ಮ ಸ್ನೇಹಿತರಿಬ್ಬರು ವೇದಿಕೆಗೆ ಬಂದು ನಮ್ಮ ಭಾಷೆಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ಮಾತಾಡಿದರು. ಹಳಗನ್ನಡ,ನಡುಗನ್ನಡ ಮತ್ತು ಹೊಸಗನ್ನಡದ ಕಾಲ, ಆ ಕಾಲದ ಶ್ರೇಷ್ಠ ಕವಿಗಳು, ಜ್ಞಾನಪೀಠ ಪ್ರಶಸ್ತಿವಿಜೇತರು ಮತ್ತು ಅವರ ಕೃತಿಗಳ ಬಗ್ಗೆ ಬೆಳಕು ಬೀರಿದರು.

ಅನಂತರ ನಮ್ಮ ಸಹೋದ್ಯೋಗಿಗಳೊಬ್ಬರು ಕರ್ನಾಟಕವನ್ನು ಚಂದವಾಗಿ ವರ್ಣಿಸುವ ಚಿತ್ರಿಸಿರುವ ಕವಿ ನಿಸಾರ್ ಅಹ್ಮದ್ ಅವರ ’ಜೋಗದ ಸಿರಿ ಬೆಳಕಿನಲ್ಲಿ’ ಹಾಡನ್ನು ಸೊಗಸಾಗಿ ಹಾಡಿದರು.

ಕೊನೆಯದಾಗಿ ಆಡಳಿತ ಸಿಬ್ಬಂದಿಯಲ್ಲೊಬ್ಬರು ವೇದಿಕೆಗೆ ಬಂದು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಕರು ನಿರೂಪಣೆಯ ಮಧ್ಯೆ ತಮ್ಮ ಹಾಸ್ಯ ಮಿಶ್ರಿತ ಮಾತುಗಳಿಂದ ಜನರನ್ನು ನಗಿಸಿ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟರು. ಇದೆಲ್ಲಾ ಆದ ಮೇಲೆ ಮೈಸೂರ್ ಪಾಕನ್ನು ನೆರೆದಿದ್ದವರಿಗೆಲ್ಲಾ ಹಂಚಿದರು. ರಾಜ್ಯೋತ್ಸವ ಕಾರ್ಯಕ್ರಮವು ಚೆನ್ನಾಗಿ ನೆರವೇರಿದ ಕಾರಣವೂ ಸೇರಿ ಮೈಸೂರು ಪಾಕ್ ತುಂಬಾನೆ ಸಿಹಿ ಆಗಿತ್ತು :)

ಕಾರ್ಯಕ್ರಮವು ಕೇವಲ ೧ ಘಂಟೆ ಮಾತ್ರ ನಡೆದಿದ್ದರೂ ನಮಗೆಲ್ಲ ಮರೆಯಲಾರದ ಅನುಭವವನ್ನು ನೀಡಿತು.ಕಾರಣಾಂತರಗಳಿಂದ ಈ ಬಾರಿ ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಲಿಲ್ಲವಾದರೂ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವದ ಆಚರಣೆ, ಸಹೋದ್ಯೋಗಿಗಳು ತೋರುತ್ತಿರುವ ಉತ್ಸುಕತೆಯನ್ನು ನೋಡಿ ಸಂತಸವಾಗುತ್ತಿದೆ.ಇದೇ ರೀತಿ ಹುಮ್ಮಸ್ಸನ್ನು ಉತ್ಸಾಹವನ್ನು ಎಲ್ಲರೂ ತೋರುತ್ತಿದ್ದರೆ ಇನ್ನು ಮುಂದೆ ’ಕನ್ನಡ ರಾಜ್ಯೋತ್ಸವ’ವು ವೇಲಂಕಣಿ ಸಂಸ್ಥೆಯಲ್ಲಿ ಕಡ್ಡಾಯ ಆಚರಣೆಯಾಗಿ ಜನಪ್ರಿಯವಾಗುವದರಲ್ಲಿ ಯಾವುದೇ ಸಂಶಯವಿಲ್ಲ.

ವಂದನೆಗಳೊಂದಿಗೆ,
ವೆಲಂಕಣಿ ಕನ್ನಡಿಗ

ಚಿತ್ರಗಳು:





















ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.