Sunday, November 30, 2008

ಇನಫೋಸಿಸ್ ಬೆಂಗಳೂರು ನಾಡ ಹಬ್ಬ

ಸಂಸ್ಥೆ: ಇನಫೋಸಿಸ್, ಬೆಂಗಳೂರು
ದಿನಾಂಕ: 13 ನವೆಂಬರ್ 2008

ನಮಸ್ಕಾರ,

ನವೆಂಬರ್ ೧೩ ರಂದು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಾದ ಇನಫೋಸಿಸ್ ಮೊಟ್ಟ ಮೊದಲ ಬಾರಿಗೆ ತನ್ನ ಆವರಣದಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸಿ ಒಂದು ಇತಿಹಾಸ ನಿರ್ಮಿಸಿದೆ. ಅಧ್ಯಕ್ಷತೆ ವಹಿಸಿದ ಶ್ರಿಮತಿ ರಮಾ ಎನ್. ಎಸ್. ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನಫೋಸಿಸ್ ನ "ಶೃತಿ" ತಂಡ ಶಾಸ್ತ್ರೀಯ ಸಂಗೀತದಿಂದ ನೀಡಿದ ಹುರುಪನ್ನು "ಲಯ ತರಂಗ" ತಂಡ ಆಧುನಿಕ ರೀತಿಯಲ್ಲಿ ಅದ್ಭುತವಾಗಿ ನುಡಿಸಿ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಇದಕ್ಕೆ ತಕ್ಕಂತೆ "ಕರ್ನಾಟಕದ ಮಹಿಳೆಯರು" ಮತ್ತು "ಸ್ಟೆಪ್ಸ್" ನೃತ್ಯ ತಂಡಗಳ ಪ್ರದರ್ಶನ ನೆರೆದಿದ್ದ ಜನರನ್ನು ಬೇರೆಯ ಲೋಕಕ್ಕೆ ಕರೆದೊಯ್ಯಿತು.

ಒಂದೂವರೆ ಘಂಟೆ ನಡೆದ ಕಾರ್ಯಕ್ರಮದಲ್ಲಿ ತುಂಬಿದ ಸಭೆಯ ಪ್ರೇಕ್ಷಕರು ತೃಪ್ತಿಯಿಂದ ಇನ್ನೊಂದು ರಾಜ್ಯೋತ್ಸವದ ನಿರೀಕ್ಷೆಯಲ್ಲಿ ತೆರಳಿದರು.

ಚಿತ್ರಗಳು:

ನಿಮ್ಮ,

ಇನ್ಫಿ ಕನ್ನಡಿಗರು


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Saturday, November 29, 2008

ಸಿಮನ್ಸ್ ಸಾಫ್ಟವೇರ್ ನಾಡ ಹಬ್ಬ

ಸಂಸ್ಥೆ: ಸಿಮನ್ಸ್ ಸಾಫ್ಟವೇರ್, ಬೆಂಗಳೂರು
ದಿನಾಂಕ: 14 ನವೆಂಬರ್ 2008

ನಮಸ್ಕಾರ,

ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ. Smiling

ಈ ಸಲ ಹೊಸದಾಗಿ ಮಾಡಿದ್ದರ ಬಗ್ಗೆ ಹೇಳ್ಬೇಕು ಅಂದ್ರೆ.......ನಮ್ಮ ಕನ್ನಡ ಮಹನೀಯರ ಬಗ್ಗೆ ತಿಳಿದುಕೊಳ್ಳುವ/ತಿಳಿಸುವ ಕೆಲಸ! ಮಂತ್ರಾಲೋಚನೆಯಲ್ಲಿ ಕೆಳಗಿನ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಕನ್ನಡ ಮಹನೀಯರ ಒಂದು ದೊಡ್ಡ ಪಟ್ಟಿ ಮಾಡಿದ್ವಿ, ರಾಜ/ರಾಣಿಯರು,ದಾಸರು,ವಚನಗಾರರು,ಸಾಹಿತಿಗಳು,ಕವಿಗಳು(ಹಳ/ನಡು/ಹೊಸಗನ್ನಡದ), ವಿಜ್ಞಾನಿಗಳು,ತಂತ್ರಜ್ಞರು, ಕ್ರೀಡಾಳುಗಳು,ಸಂಗೀತಗಾರರು, ಚಲನಚಿತ್ರಗಾರರು……ಮುಂತಾದವರು. ಆ ಮಹನೀಯರ ಫೋಟೋದೊಂದಿಗೆ, ಅವರ ಕಿರು ಪರಿಚಯ ಮತ್ತು ಸಾಧನೆಗಳ ಬಗ್ಗೆ ಒಂದು ಹಾಳೆಯಷ್ಟು ವಿಚಾರವನ್ನ ಚಿಕ್ಕದಾಗಿ ಚೊಕ್ಕವಾಗಿ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯೋದು/ಸಂಗ್ರಹಿಸೋದು.

ನಾವೆಲ್ಲರೂ ನಮ್ಮ ಮೆಚ್ಚಿನ ಮಹನೀಯರನ್ನ ಆಯ್ಕೆ ಮಾಡ್ಕೊಂಡು ಬರೆದು ಮುಗಿಸಿದ್ವಿ. ನಾನು ಮೊದಲು ಬರೆದದ್ದು ನನ್ನ ನೆಚ್ಚಿನ ಕೆ.ಎಸ್.ನ.ರ ಬಗ್ಗೆ, ನಂತರ ಶಿಶುನಾಳ ಶರೀಫ, ಬಿ.ಎಂ.ಶ್ರೀ, ಮಾಸ್ತಿಯವರ ಬಗ್ಗೆ ಬರೆದೆ.

ಹೀಗೆ ಸಂಗ್ರಹಿಸಿದ ಲೇಖನಗಳನ್ನ ದಿನಕ್ಕೆ ಒಂದರಂತೆ ನವೆಂಬರ್ ತಿಂಗಳಿಡೀ ಕನ್ನಡ ಮಹನೀಯರ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿರೋ ಲೇಖನವನ್ನ ನಮ್ಮಾಫೀಸ್ನಲ್ಲಿರೋವ್ರಿಗೆಲ್ಲಾ (ಸುಮಾರು 4 ಸಾವಿರ ಜನ ಅಂದ್ಕೊಳ್ಳಿ!) ಕಳಿಸೋದು. ಇದಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಬಂದವು. ಕನ್ನಡಿಗರಷ್ಟೇ ಅಲ್ದೆ ಎಲ್ಲರಿಂದಲೂ ಪ್ರತಿಕ್ರಿಯೆ ಬಂದದ್ದು ಕಂಡು ಬಹಳ ನಲಿವಾಯ್ತು.

ಒಂದು ವಿಚಾರ ಮರೀದೆ ಬರೆಯಬೇಕು ಅದೇನಂದ್ರೆ ಈ ಲೇಖನಗಳನ್ನ ಸಂಗ್ರಹಿಸುವಾಗ ನೆರವು ತೆಗೆದುಕೊಂಡದ್ದು ಕನ್ನಡ ವಿಕಿಪೀಡಿಯಾದಿಂದ. ಅಲ್ಲಿ ಬರೆದ ಎಲ್ಲಾ ಲೇಖಕರಿಗೂ ಮತ್ತು ಕನ್ನಡ ವಿಕಿಪೀಡಿಯಾದ ಬೆನ್ನೆಲುಬಾದ ನಮ್ಮ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು.

(ಕಳೆದ ವರ್ಷದ ವಿಚಾರ ಏನಂದ್ರೆ 'ಕನ್ನಡ coffee' ಅಂತ ‘ಕನ್ನಡ ಕಲಿಸುವ ಕ್ಲಾಸ್’ ನಡೆಸಿದ್ದು. ಸುಮಾರು ಸಹೋದ್ಯೋಗಿಗಳು ಕನ್ನಡ ಮಾತಾಡೋದನ್ನ ಕಲಿತದ್ದು ಸಂತಸದ ವಿಚಾರ. Smiling )

ನವೆಂಬರ್ ಮೊದಲ ವಾರದಿಂದ ಯೋಜನೆಯಂತೆ ಎಲ್ಲಾ ಸ್ಪರ್ಧೆಗಳು ಸಾಂಗವಾಗಿ ನಡೆದವು. ಸ್ಪರ್ಧೆಗಳಲ್ಲಿ,

  1. ಶತ ಪ್ರತಿಶತ ಕನ್ನಡ - ಇದು ಒಂದು ನಿಮಿಷದ ಸ್ಪರ್ಧೆ. ಪ್ರಶ್ನೆಗಳನ್ನ ಕನ್ನಡ/ಇಂಗ್ಲೀಷ್/ಕಂಗ್ಲೀಷ್ನಲ್ಲಿ ಕೇಳಲಾಗುತ್ತೆ….ಆದ್ರೆ ಉತ್ತರ ಮಾತ್ರ ಪೂರ್ತಿ ಕನ್ನಡದಲ್ಲೆ ಹೇಳ್ಬೇಕು Laughing out loud ಸಕತ್ ಮಜಾ ಇತ್ತು!
  2. ಕವನ, ಹನಿಗವನ, ಚುಟುಕ ಸ್ಪರ್ಧೆ
  3. ಚುಕ್ಕಿ ಚಿತ್ತಾರ - ರಂಗೋಲೆ ಸ್ಪರ್ಧೆ
  4. ಬರವಣಿಗೆ - ಕನ್ನಡ/ಕರ್ನಾಟಕದ ಬಗ್ಗೆ ಕೊಡುವ ಚಿತ್ರಪಟದ ಬಗ್ಗೆ ಒಂದು ನಿಮಿಷದಲ್ಲಿ ಲೇಖನ ಬರೆಯುವುದು.
  5. ಕನ್ನಡ ಮಹನೀಯರ ಚಿತ್ರ, ಪರಿಸರದ ಚಿತ್ರ, ವ್ಯಂಗ್ಯ ಚಿತ್ರ ಬಿಡಿಸುವ ಸ್ಪರ್ಧೆ

ಇನ್ನು ಕಾರ್ಯಕ್ರಮದ ದಿನ 14 ನವೆಂಬರ್ 2008ರ ಬಗ್ಗೆ ಹೇಳ್ಬೇಕು ಅಂದ್ರೆ ಒಂಥರಾ ಹಬ್ಬದ ವಾತಾವರಣ. ರಂಗೊಲೆ,ಮಾವಿನ ತೋರಣದಿಂದ ಅಲಂಕೃತಗೊಂಡ ಸಭಾಂಗಣ ನಮ್ಮೆಲ್ಲರ ಸಡಗರವನ್ನ ಹಿಮ್ಮಡಿಗೊಳಿಸುತ್ತಿತ್ತು. ದ್ವಾರದಲ್ಲೇ ಕರ್ನಾಟಕದ ನಕಾಶೆಯನ್ನ ಬಣ್ಣಗಳಿಂದ ಬಿಡಿಸಿದ್ದರು. ಎಲ್ಲಾ ಹೆಣ್ಮಕ್ಕಳು ರೇಷ್ಮೆ ಸೀರೆಯಲ್ಲಿದ್ದರೆ ಗಂಡುಮಕ್ಕಳು ಅಂಗಿ,ಪಂಚೆ ಶಲ್ಯದಲ್ಲಿದ್ದರು. ಕಾರ್ಯಕ್ರಮ ಶುರುವಾಗೋ ಹೊತ್ತಿಗೆ ಸಭಾಂಗಣ ಪೂರ್ತಿ ತುಂಬಿ ತುಳುಕುತ್ತಿತ್ತು.

ನಡೆದ ಕಾರ್ಯಕ್ರಮಗಳು ಹೀಗಿದ್ದವು:

  1. 'ತಾಯೆ ಶಾರದೆ ಲೋಕ ಪೂಜಿತೆ' ಪ್ರಾರ್ಥನೆಯಿಂದ ಶುರುವಾದದ್ದು,
  2. 'ಹಚ್ಚೇವು ಕನ್ನಡದ ದೀಪಾ' ನೃತ್ಯ
  3. 'ತಾಯೆ ಬಾರಾ ಮೊಗವ ತೋರ' ಹಾಡು.
  4. ಹಳೆ ಕನ್ನಡ ಚಲನಚಿತ್ರದ ಹಾಡುಗಳಿಗೆ ನೃತ್ಯ.
  5. ಹುಡುಗರು ಮತ್ತು ಮೇಷ್ಟ್ರ ಇಸ್ಕೂಲಿನ ಕಿರು ಹಾಸ್ಯ ನಾಟಕ.
  6. ಕೈಲಾಸಕ್ಕೂ recession ತಪ್ಪಿದ್ದಲ್ಲ ಅನ್ನೋ ಒಂದು ಕಿರು ಹಾಸ್ಯ ನಾಟಕ… Laughing out loud Laughing out loud
  7. ನಮ್ಮಾಫೀಸಿನ 'ಬೀಚಿ' ಅಂತಲೇ ಪ್ರಸಿದ್ದಿಯಾಗಿರುವ ರಾಘವೇಂದ್ರರಿಂದ ಹಾಸ್ಯ ಭಾಷಣ. ಅದೆಷ್ಟು ನಕ್ಕಿದ್ದು ಅಂತೀರಿ...ಚಪ್ಪಾಳೆ ಮೇಲೆ ಚೆಪ್ಪಾಳೆ Laughing out loud

ಚಿತ್ರಕಲೆ ಪ್ರದರ್ಶನ ಇತ್ತು. ಅಲ್ಲಿ ನನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆ ಚಿತ್ರ ಕೂಡ ಇತ್ತು Smiling

ಮೂರು ದಿನಗಳವರೆಗೆ ಟೋಟಲ್ ಕನ್ನಡ ಡಾಟ್ ಕಾಂ ಅವರ ಕನ್ನಡ ಪುಸ್ತಕಗಳು,T ಅಂಗಿ,ಹಾಡು,ಚಲನ ಚಿತ್ರಗಳ ಸಿಡಿ/ಡಿವಿಡಿಗಳ ಮಾರಾಟ ಮಳಿಗೆ ಇಟ್ಟಿದ್ರು. ಇಷ್ಟೆಲ್ಲಾ ಓದಿದ ಮೇಲೆ ನಿಮ್ಮಲ್ಲಿ ಕೆಲವು ಪ್ರಶ್ನೆಗಳು ಕಾಡಿರಬಹುದು.ಉತ್ತರಗಳನ್ನ ಮೊದಲೇ ತಿಳಿಸುವೆ. ಇಲ್ಲ ಬಹಳ ವರ್ಷಗಳಿಂದ ಅಲ್ಲ…ಕನ್ನಡ ರಾಜ್ಯೋತ್ಸವದ ಆಚರಣೆಯನ್ನ ಮೂರು ವರ್ಷಗಳ ಹಿಂದೆ ಅಷ್ಟೆ ಶುರು ಮಾಡಿದ್ದು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಮತ್ತು ಯುಗಾದಿ ಹಬ್ಬಕ್ಕೊಂದು ಕನ್ನಡದ ನಾಟಕ ಇವೆರಡನ್ನ ಮಾತ್ರ ವಿಶೇಷವಾಗಿ ಆಚರಿಸಲಾಗತ್ತೆ. ಸ್ಪರ್ಧೆಗಳನ್ನ ಆಫೀಸ್ ಕೆಲಸದ ಸಮಯ ಮುಗಿದ ನಂತರವೇ ನಡೆಸಿದ್ದು.

ಇಷ್ಟೆಲ್ಲಾ ಕಾರ್ಯಕ್ರಮ ನಡೆಸೋದಕ್ಕೆ ಬೇಕಾದ ಹಣ...ಎಲ್ಲಾ ಸಹೃದಯ ಸಹೋದ್ಯೋಗಿಗಳ ಇಚ್ಛೆಯಂತೆ ನೀಡಿದ ದೇಣಿಗೆಯ ರೂಪದಲ್ಲಿ ಬಂದದ್ದು. ಕನ್ನಡಿಗ,ತಮಿಳ,ಹಿಂದಿ,ತೆಲುಗ,ಮಲೆಯಾಳಿ ಅನ್ನೋ ಭಾವವೇನೂ ಇರಲಿಲ್ಲ! ಹತ್ತಿರ ಹತ್ತಿರ ಒಂದು ಲಕ್ಷ ರೂಪಾಯಿಗಳು ಸಂಗ್ರಹವಾಯ್ತು...ಕಾರ್ಯಕ್ರಮಕ್ಕೆ ಮಿತವಾಗಿ ಖರ್ಚು ಮಾಡಿ ಉಳಿದಷ್ಟು ಹಣವನ್ನ ಇತ್ತೀಚೆಗೆ ರಸ್ತೆ ಅಫಘಾತದಲ್ಲಿ ದುರ್ಮರಣ ಹೊಂದಿದ ನಮ್ಮ ಸಹೋದ್ಯೋಗಿಯ ಕುಟುಂಬಕ್ಕೆ ನೀಡಿದೆವು.

ಆಫೀಸಿನ ಮ್ಯಾನೇಜ್ಮೆಂಟ್ ನವೆಂಬರ್ ತಿಂಗಳಿನ 14ನೇ ತಾರೀಖಿನ ಮಧ್ಯಾಹ್ನದ ಎರಡು ಗಂಟೆಗಳಷ್ಟು ಕಾಲವನ್ನ ಎಲ್ಲಾ ಸಹೋದ್ಯೋಗಿಗಳೂ ಕಾರ್ಯಕ್ರಮದಲ್ಲಿ (ಆಯೋಜಿಸಲು) ಭಾಗವಹಿಸಲು ….ಅನುಮತಿ/ಅನುಕೂಲ ಮಾಡಿಕೊಟ್ಟಿದ್ದರು. ಅದಕ್ಕೆ ನಾವುಗಳು ಋಣಿ.

ಧನ್ಯವಾದಗಳು.

-ಸಿಮನ್ಸ್ ಕನ್ನಡಿಗರು

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸಿಂಫೋನಿ ಸರ್ವಿಸಸ್ ನಲ್ಲಿ ನಾಡ ಹಬ್ಬ

ಸಂಸ್ಥೆ: ಸಿಂಫೋನಿ ಸರ್ವಿಸಸ್, ಬೆಂಗಳೂರು
ದಿನಾಂಕ: 6 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ದಿನಾಂಕ 06/11/2008 ರಂದು, ನಾವು ನಮ್ಮ ಸಿಂಫೋನಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಿದೆವು. ಆ ದಿನ ಬೆಳಗ್ಗೆ 9:45 ಕ್ಕೆ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಗಿ, ತದನಂತರ ಕಛೇರಿಯ ಆವರಣದಲ್ಲಿ ಡೊಳ್ಳು ಕುಣಿತವನ್ನ ಏರ್ಪಡಿಸಲಾಗಿತ್ತು. ನಂತರ ಸಂಜೆ ಸಾಂಸ್ಕ್ರುತಿಕ ಕಾರ್ಯಕ್ರಮವಿತ್ತು.

ಡೊಳ್ಳು ಕುಣಿತಕ್ಕೆ ಕಛೇರಿಯ ಎಲ್ಲರಿಂದಲೂ ( ಕನ್ನಡಿಗರಲ್ಲದವರಿಂದಲೂ) ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದು, ರಾಜ್ಯೋತ್ಸವಾಚರಣೆ ತುಂಬಾ ಯಶಸ್ವಿಯಾಯಿತು. ಈ ಒಂದು ಯಶಸ್ವಿ ಕಾರ್ಯಕ್ರಮವನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯ ಫಲವಾಗಿ ಈ ಮಿಂಚೆ.

ರಾಜ್ಯೋತ್ಸವಾಚರಣೆ ಕುರಿತು ನಮ್ಮ ಕಛೇರಿಯ ಮುಖ್ಯಸ್ಥರಿಂದ(President, India Operations) ಬಂದ ಪ್ರತಿಕ್ರಿಯೆ:
Dear Colleagues,
Comes November month, people of Karnataka are in a joyous mood to celebrate the Karnataka Raajyotsava. In the month of November every year, the people of Karnataka commemorate the formation of state with several activities like, cultural, literary and folk dance which showcase the rich culture and heritage of Karnataka.

Today morning, I was overwhelmed with joy to see the celebrations arranged by our young Kannada colleagues starting with lighting the lamp , to the "Dollu Kunitha" dance. I am sure the rest of the events in the day will be as interesting and absorbing.

Karnataka have contributed immensely to the India's rich folkloric tradition also. It has the folk dances like: Yakshagaana, Veeragaase, Dollu Kunitha, Kamsaale Kunitha and others. Dollu Kunitha is a popular drum dance, which we enjoyed very much!. The large drums are decorated with colored cloth, and are slung around the necks of men. The dances are at times accompanied with songs relating to religious praise or wars. It spoke volumes of the rich traditions of India. I come from Bengal , which is also extremely rich in culture and traditions. I enjoyed every bit of the dance celebrations!

Karnataka's contribution to music is unparalleled. It developed a school of music that is called Karnatic School. Carnatic music spread all over south India and it is one of the two dominant musical styles in India. To top it all, Pandit Bhim Sen Joshi, one of the sons of the soil of Karnataka has been awarded the BHARAT RATNA award, something I am sure all Indians will feel proud of!

Karnataka has contributed in a great way for the rich monumental heritage of India in the form of Hampi, Pattadakallu, Badami, Beluru, Halebidu and others. Among these, Hampi and Pattadakallu are listed in the World Heritage Centers of UNESCO.

For the last 2.5 years I have adopted Bangalore and Karnataka as my adopted home. My children are now studying in Bangalore. My wife and me , along with our family, are liking and enjoying the rich traditions of Karnataka. Over the next year, we do hope to go around an savor this beautiful state.

I take this opportunity to salute this great tradition and culture and wish all Symphonians great times!

With Regards,
Amitava

ವಂದನೆಗಳು,
ಸಿಂಫೋನಿ ಕನ್ನಡಿಗರು

ಚಿತ್ರಗಳು:



ಹೆಚ್ಚಿನ ಚಿತ್ರಗಳಿಗೆ, ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ:
http://picasaweb.google.co.in/rudresha.hk/KarnatakaRaajyotsavaSymphonyServices?authkey=9I2YNm4b9gc#



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ನೆಸ್ ಟೆಕ್ನಾಲಜಿಸ್ ನಾಡ ಹಬ್ಬ

ಸಂಸ್ಥೆ: ನೆಸ್ ಟೆಕ್ನಾಲಜಿಸ್, ಬೆಂಗಳೂರು
ದಿನಾಂಕ: ೮ ನವೆಂಬರ್ ೨೦೦೮

Namaskara,

A beautiful stage was arranged having a dias for people to perform, and a PPT depicting famous places and people from Karnataka. The whole of terrace was decorated with Kannad Bhavuta.

For lunch and snacks, we had ordered Kannada style food It started with kannada song, Hachevu Kannadada deepa, followed by Lighting of Jyothi , and speach by one of the senior level executive.

Then later on followed by many cultural programmes like, Skit, Fashion Show, Haadugalu, Kolalu Vaadana, Mimicry.... ella kannadadalli.

This function witnessed around 500 people, watching all the programmes till the end. It lasted for around 2.5 - 3 hours.

People behind the event:
Babu Narendra
Naveen Kumar from HR
Raghavendra from HR
Hemath Karuna

ಧನ್ಯವಾದಗಳು,
ನೆಸ್ ಕನ್ನಡಿಗರು

ಚಿತ್ರಗಳು:










ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸಿಸ್ಕೊ ಸಿಸ್ಟಮ್ಸ್ ನಲ್ಲಿ ನಾಡ ಹಬ್ಬ

ಸಂಸ್ಥೆ: ಸಿಸ್ಕೊ ಸಿಸ್ಟಮ್ಸ್, ಬೆಂಗಳೂರು
ದಿನಾಂಕ: 14 ನವೆಂಬರ್ 2008

ನಮಸ್ಕಾರ,

ಸಂಭ್ರಮ,,, ಈ ಹೆಸರಲ್ಲಿಯೇ ಸಂತಸದ ಹೊಳೆ, ಹಬ್ಬದ ಕಳೆ ಇದೆ. ಸಿಸ್ಕೊ ಕಂಪನಿಯ ಕನ್ನಡ ಬಳಗ "ಸಂಭ್ರಮ" ಕಳೆದ ಶುಕ್ರವಾರ, ೧೪/೧೧/೨೦೦೮, ರಂದು ಅದ್ದೂರಿಯಾಗಿ ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಸಿಸ್ಕೊ ಕಂಪನಿಯ ಎಲ್ಲ ಕಚೇರಿಗಳು ಮದುಮಗಳಂತೆ ಅಲಂಕೃತಗೊಂಡಿದ್ದವು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದವರು ಹಿರಿಯ ಸಾಹಿತಿಗಳಾದ ಶ್ರೀ ಸಾ. ಶಿ.ಮರುಳಯ್ಯನವರು. ಎಷ್ಟು ಹಿರಿಯ ಸಾಹಿತಿಯೋ ಅಷ್ಟೇ ಸಹೃದಯಿ, ಬಿಚ್ಚು ಮನಸ್ಸಿನ ನುಡಿಯವರು. ಸಿಸ್ಕೊ ಕನ್ನಡಿಗರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹಬ್ಬಕ್ಕೆ ಇನ್ನಷ್ಟು ಮೆರುಗು ತಂದರು. ಸಮಾರಂಭದ ಮತ್ತೊಂದು ಆಕರ್ಷಣೆಯಂದರೆ, ಸಿಸ್ಕೋ ಸಂಸ್ಥೆಯ ಆಡಳಿತಾಧಿಕಾರಿ (ಭಾರತ), ಅರವಿಂದ್ ಸೀತಾರಾಮನ್ ರವರು ಆಗಮಿಸಿದ್ದು. ಅರವಿಂದ್ ಸೀತಾರಾಮನ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಭವ್ಯ ಪರಂಪರೆಯ ಬಗ್ಗೆ ತಮಗಿರುವ ಅಪಾರ ಗೌರವವನ್ನು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದರು.ಅಷ್ಟೇ ಅಲ್ಲದೇ, ಕರ್ನಾಟಕವನ್ನು ಆಳಿದ ಬೇರೆ ಬೇರೆ ಸಾಮ್ರಾಜ್ಯಗಳ ಬಗ್ಗೆ ನೆರೆದಿದ್ದ ಸಭಿಕರಿಗೆ ಪ್ರಶ್ನೆಗಳನ್ನು ಕೇಳಿ ಕರ್ನಾಟಕಕ್ಕಿರುವ ಭವ್ಯ ಇತಿಹಾಸವನ್ನು, ಅದನ್ನು ನಾವೆಲ್ಲರೂ ತಿಳಿಯಬೇಕಾದ ಅಗತ್ಯವನ್ನು ನೆರೆದಿದ್ದ ಎಲ್ಲರ ಮನದಲ್ಲಿ ತುಂಬುವಲ್ಲಿ ಯಶಸ್ವಿಯಾದರು. ಸಿಸ್ಕೊ ಕಂಪನಿಯಲ್ಲಿ , ಈ ಕನ್ನಡ ಹಬ್ಬ ಪ್ರತಿ ವರ್ಷ ತಪ್ಪದೇ ನಡೆಯಬೇಕು, ಅದಕ್ಕೆ ಬೇಕಾಗುವ ಎಲ್ಲ ಆರ್ಥಿಕ ನೆರವನ್ನು ತಾವು ನೀಡುವುದಾಗಿ ಘೋಷಿಸಿದ ಅವರ ಮಾತಿಗೆ ನೆರೆದ ಜನ ಸಿಳ್ಳೆ ಚಪ್ಪಾಳೆಯ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.

ರತ್ನನ ಪದಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನೆಲೆಸಿರುವ, ನಾಯಿ ಮರಿ ನಾಯಿ ತಿಂಡಿ ಬೇಕೇ? ಮುಂತಾದ ಹಲವಾರು ಸರಳ ಪದಗಳ ಮೂಲಕ ಚಿಣ್ಣರ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ಕೊಟ್ಟ ಕನ್ನಡದ ಖ್ಯಾತ ಸಾಹಿತಿ ಜಿ. ಪಿ. ರಾಜರತ್ನಂರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸಮಾರಂಭದ ವೇದಿಕೆಯನ್ನು ಜಿ. ಪಿ. ರಾಜರತ್ನಂ ವೇದಿಕೆ ಎಂದು ನಾಮಕರಣ ಮಾಡಿ ಕಾರ್ಯಕ್ರಮವನ್ನು ಅವರಿಗೆ ಅರ್ಪಿಸಲಾಯಿತು. ಸಿಸ್ಕೊ ಕನ್ನಡಿಗರು ಪ್ರಸ್ತುತ ಪಡಿಸಿದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು. ಸಂಭ್ರಮ ತಂಡ ನಡೆಸಿದ ರತ್ನನ ಪದಗಳನ್ನೇ ಆದರಿಸಿದ ಕಿರು ನಾಟಕ ವಿಶೇಷ ಮನ್ನೆಣೆಗೆ ಪಾತ್ರವಾಯಿತು. ಕನ್ನಡ ಸಾಹಿತ್ಯವನ್ನು ಪೋಷಿಸುವ ಧ್ಯೇಯದೊಂದಿಗೆ, ರಸ ಪ್ರಶ್ನೆ ವಿಜೇತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ ಎರಡು ಪುಸ್ತಕ ಮಾಲಿಕೆಗಳನ್ನು ಕಾಣಿಕೆಯಾಗಿ ನೀಡಿದರು.

ಈ ನೆಲದ ಋಣ ಐ.ಟಿ ಕನ್ನಡಿಗನ ಮೇಲಿದೆ, ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾ, ಮಾಧ್ಯಮವನ್ನು ಆತ ಬಳಸಬೇಕು, ಬೆಳೆಸಬೇಕು, ಎಲ್ಲೇ ಹೋದರೂ ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯಬಾರದು, ಇಷ್ಟಾದರೇ ಕರ್ನಾಟಕದ ಹೃದಯವಾದ ಬೆಂಗಳೂರಿನಲ್ಲಿ ಕನ್ನಡವನ್ನು ಅಳಿಸಲು ಯಾರಿಂದಲೂ ಆಗದು ಎನ್ನುವ ಸಂಭ್ರಮ ತಂಡದ ಹರೀಶಾ ಅವರ ಮಾತು ಸಭಿಕರನ್ನು ಚಿಂತನೆಗೆ ಹಚ್ಚಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಕರ್ನಾಟಕದ ಬೇರೆ ಬೇರೆ ಭಾಗದ ವಿಶೇಷವನ್ನೊಳಗೊಂಡ ಭರ್ಜರಿ ಊಟ ಬಡಿಸಲಾಯಿತು. ತಮ್ಮ ಇಳಿ ವಯಸ್ಸಲ್ಲೂ, ಸಮಾರಂಭದ ಕೊನೆಯವರೆಗೂ ಹಾಜರಿದ್ದು, ಎಲ್ಲರೊಡನೆ ಬೆರೆತ ಸಾ.ಶಿಯವರು ನೆರೆದಿದ್ದ ಸಭಿಕರ ಗೌರವಕ್ಕೆ ಪಾತ್ರರಾದರು.

ವಂದನೆಗಳು,

ಸಿಸ್ಕೊ ಕನ್ನಡಿಗರು

ಚಿತ್ರಗಳು:


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Friday, November 28, 2008

ವೇಲಂಕಣಿ ಸಾಫ್ಟವೇರ್ ನಲ್ಲಿ ನಾಡ ಹಬ್ಬ

ಸಂಸ್ಥೆ: ವೇಲಂಕಣಿ ಸಾಫ್ಟವೇರ್ಸ್, ಬೆಂಗಳೂರು
ದಿನಾಂಕ: 8 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ನಮ್ಮ ’ವೇಲಂಕಣಿ’ ಸಂಸ್ಥೆಯಲ್ಲಿ ನವಂಬರ್ ೮ ೨೦೦೮ ರಂದು ’ಕನ್ನಡ ರಾಜ್ಯೋತ್ಸವವನ್ನು’ ಉತ್ಸಾಹದಿಂದ ಆಚರಿಸಿದೆವು. ನಾನು ಈ ಸಂಸ್ಥೆ ಸೇರಿದಾಗಿನಿಂದ ಇದು ಎರಡನೆ ಕನ್ನಡ ರಾಜ್ಯೋತ್ಸವ. ದಿನಗಳು ಹೇಗೆ ಕಳೆಯುತ್ತಿವೆ ಅಂತ ಆಶ್ಚರ್ಯ ಆಗುತ್ತೆ. ನಿನ್ನೆ ಮೊನ್ನೆ ಅಷ್ಟೆ ನಾವು ಮೊದಲನೆ ರಾಜ್ಯೋತ್ಸವ ಮಾಡಿದೆವು ಅಂತ ಅನಿಸ್ತಿದೆ :) ಈ ಬಾರಿ ನಮ್ಮ ಮಾನವ ಸಂಪನ್ಮೂಲ ಇಲಾಖೆಯ ಸಹೋದ್ಯೋಗಿಗಳು ರಾಜ್ಯೋತ್ಸವವನ್ನು ಆಚರಿಸಲು ಅವರಾಗಿಯೇ ಮುಂದೆ ಬಂದು, ನಮಗೆ ಆ ದಿನ ನಡೆಯುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಮ್ಮ ಸಹೋದ್ಯೋಗಿಗಳ ಉತ್ಸಾಹವು ಕೊಂಚ ಜಾಸ್ತಿಯೇ ಇತ್ತು ಅಂತ ಹೇಳ್ಬೇಕು. ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ಧರಿಸಿದ್ದ ಸಾಂಪ್ರದಾಯಿಕ ತೊಡಿಗೆಗಳಿಂದ ಅದು ಸ್ಪಷ್ಟವಾಗಿತ್ತು :)

ಅಂದು ನಾವೆಲ್ಲರೂ ನಮ್ಮ ಸಂಸ್ಥೆಯ ಪಕ್ಕದ ಒಂದು ಸ್ಥಳದಲ್ಲಿ ಸರಿಯಾಗಿ ಸಂಜೆ ೪ ಘಂಟೆಗೆ ಸೇರಿದೆವು. ಕಾರ್ಯಕ್ರಮದ ನಿರೂಪಕರು ನಮ್ಮನ್ನೆಲ್ಲ ಸ್ವಾಗತಿಸುತ್ತ ನೆರೆದಿದ್ದ ಜನರನ್ನು ೨ ಸಾಲಿನಲ್ಲಿ ನಿಲ್ಲಿಸಿ ನಮ್ಮ ಸಂಸ್ಥೆಯ ಮುಂಭಾಗದಲ್ಲಿರುವ ಧ್ವಜಾರಾಹೋಣದ ಸ್ಥಳಕ್ಕೆ ಹೋಗಲು ಹೇಳಿದರು. ನಾವೆಲ್ಲ’ಸಿರಿಗನ್ನಡಮ್ ಗೆಲ್ಗೆ, ಸಿರಿಗನ್ನಡಮ್ ಬಾಳ್ಗೆ, ಜಯ ಕರ್ನಾಟಕ’ ಅಂತ ಘೋಷಗಳನ್ನು ಕೂಗುತ್ತ ಕನ್ನಡ/ಕರ್ನಾಟಕದ ಬಗ್ಗೆ ಬರೆದಿರುವ ಹಾಡುಗಳನ್ನು ಹಾಡುತ್ತ ನಡೆದೆವು.

ಕಾರ್ಯಕ್ರಮವು ವಿಘ್ನವಿನಾಶಕ ಗಣೇಶನ ಸ್ತುತಿಯಿಂದ ಶುರುವಾಯಿತು. ಅನಂತರ ನಿರೂಪಕರು ಕರ್ನಾಟಕದ ಉಗಮ, ರಾಜ್ಯೋತ್ಸವದ ಹಿನ್ನೆಲೆ, ’ಕರ್ನಾಟಕ’ ಎನ್ನುವ ಹೆಸರಿನ ಮತ್ತು ಹಳದಿ-ಕೆಂಪು ಬಣ್ಣದ ಧ್ವಜದ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ನೆರೆದಿದ್ದವರಿಗೆ ಇಂಗ್ಲೀಷಿನಲ್ಲಿ ತಿಳಿಸಿದರು. ನಿರೂಪಣೆಯ ಈ ಭಾಗ ಮಾತ್ರ ಆಂಗ್ಲ ಭಾಷೆಯಲ್ಲಿತ್ತು.

ತದನಂತರ ಕನ್ನಡದವರೇ ಆದ ನಮ್ಮ ಹಿರಿಯ ತಾಂತ್ರಿಕ ನಿರ್ದೇಶಕರೊಬ್ಬರು ಧ್ವಜಾರೋಹಣ ಮಾಡಿದರು. ಅವರು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಜುಬ್ಬಾ ಧರಿಸಿ ಬಂದಿದ್ದು ನಮಗೆಲ್ಲಾ ಅಚ್ಚರಿ ಮತ್ತು ಸಂತೋಷವನ್ನು ತಂದಿತ್ತು :) ೧೫ ನಿಮಿಷ ಮಾತಾಡಿದ ಅವರು ಕರ್ನಾಟಕ,ಕನ್ನಡ ಸಂಸ್ಕೃತಿ,ಕನ್ನಡಿಗರ ಸತ್ಕಾರ ಗುಣ ಹಾಗು ವಿಶಾಲ ಮನೋಭಾವ, ಕನ್ನಡ ಮಾತಾಡುವ ವಿಭಿನ್ನ ಶೈಲಿಗಳು ( ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ಹವ್ಯಕ ಕನ್ನಡ ಇತ್ಯಾದಿ ),ಕರ್ನಾಟಕ ಸಂಗೀತ, ಕೈಗಾರಿಕೆ ಹಾಗು ವಿವಿಧ ಕ್ಷೇತ್ರದಲ್ಲಿ ಭಾರತಕ್ಕೆ ಕನ್ನಡಿಗರ ಕೊಡುಗೆಗಳ ಬಗ್ಗೆ ಮಾತಾಡಿದರು. ಬೇರೆ ರಾಜ್ಯದಿಂದ ಇಲ್ಲಿಗೆ ಬಂದ ಜನರಿಗೆ ಕನ್ನಡ ಕಲಿಯಲು ಆಗ್ರಹಿಸಿದರು. ಕರ್ನಾಟಕವು ಒಂದು ರೀತಿ ವಿವಿಧ ಜಗತ್ತುಗಳು ಸಂಧಿಸುವ ತಾಣವಾಗಿದೆ ಮತ್ತು ಕರ್ನಾಟಕವು ಹವಾಗುಣ,ನೈಸರ್ಗಿಕ ಸಂಪನ್ಮೂಲಗಳು, ಔದ್ಯೋಗಿಕ ಅವಕಾಶಗಳು, ಸಾಮರಸ್ಯ ಇವೆ ಮುಂತಾದ ಅನುಕೂಲಗಳನ್ನು ಇಲ್ಲಿರುವವರಿಗೆ ಮತ್ತು ಕೆಲಸವನ್ನಿ ಅರಸಿ ಬರುವವರಿಗೆ ನೀಡುತ್ತದೆ. ಆದ್ದರಿಂದ ಇಲ್ಲಿ ನೆಲೆಸುವವರೆಲ್ಲರೂ ರಾಜ್ಯೋತ್ಸವದಂತ ದಿನಗಳನ್ನು ಆಚರಿಸಿ, ಆಚರಣೆಗಳಲ್ಲಿ ಪಾಲ್ಗೊಂಡು ಈ ರಾಜ್ಯಕ್ಕೆ ಒಂದು ವಿಧದಲ್ಲಿ ಕೃತಜ್ಙತೆಯನ್ನು ಸಲ್ಲಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ, ಇಷ್ಟೆಲ್ಲಾ ಅನುಕೂಲಗಳನ್ನು ಒದಗಿಸುತ್ತಿರುವ ಈ ರಾಜ್ಯದಲ್ಲಿ ನೆಲೆಸಿರುವ ನಮಗೆಲ್ಲರಿಗೂ ಈ ಸ್ಥಳವನ್ನು, ಕನ್ನಡ ಭಾಷೆಯನ್ನು ಗೌರವಿಸಿ ಪೂಜಿಸುವುದು ನಮ್ಮ ಭಾಗ್ಯವೇ ಆದ್ದರಿಂದ ಬೇರೆಯವರು ತಾವು ಹೊರಗಿನವರು ಅಂತಂದುಕೊಳ್ಳದೆ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಮತ್ತು ಸಾಧ್ಯವಾದರೆ ಈ ಸಂಸ್ಕೃತಿಗೆ ಈ ರಾಜ್ಯಕ್ಕೆ ಒಳ್ಳೆಯ ರೀತಿಯಲ್ಲಿ ಕೊಡುಗೆ ನೀಡಬೇಕು ಅಂತ ಹೇಳಿದರು. ತಮ್ಮ ಭಾಷಣದ ಕೊನೆಗೆ ’ಜೈ ಕರ್ನಾಟಕ’ ಎಂದು ೩ ಬಾರಿ ಹೇಳಿ ನಾವೆಲ್ಲರು ಅವರೊಟ್ಟಿಗೆ ಹೇಳುವಂತೆ ಮಾಡಿದರು.

ಇದಾದನಂತರ ವೇದಿಕೆ ನಮ್ಮದಾಯಿತು :) ೧೫-೨೦ ಸದಸ್ಯರಿದ್ದ ನಾವು ನಾಡಗೀತೆಯಾದ ಕು.ವೆಂ.ಪು ರವರ ’ಜಯ ಭಾರತ ಜನನಿಯ ತನುಜಾತೆ’ಯನ್ನು ಹಾಡಿದೆವು. ಗಾಯನದಲ್ಲಿ ಭಾಗವಹಿಸಿದವರೆಲ್ಲರೂ ನಾಡಗೀತೆ ಚೆನ್ನಾಗಿ ಬರಲು ಶಕ್ತಿ ಮೀರಿ ಪ್ರಯತ್ನಿಸಿದರು.ಹಾಡುವಾಗ ನಮ್ಮ ಸ್ನೇಹಿತರು ತೋರಿದ ಹೊಂದಾಣಿಕೆ ಮರೆಯಲಾರದಂತದು. ಏಕೆಂದರೆ ನಾವು ಅವತ್ತು ಕಾರ್ಯಕ್ರಮ ಶುರುವಾಗಲು ೩ ತಾಸು ಇದ್ದಾಗ ಮಾತ್ರ ಅಭ್ಯಾಸ ಮಾಡಿದ್ದೆವು. ಹಾಡುವ ರಾಗ, ಏರಿಳಿತಗಳು ಸರಿಯಾಗಿ ಬರುವಲ್ಲಿ ಯೂಟ್ಯೂಬ್ ನಲ್ಲಿ ನಮಗೆ ದೊರೆತ ನಾಡಗೀತೆಯ ದೃಶ್ಯಮುದ್ರಣದ ತುಣುಕು ಭಾರಿ ಸಹಾಯ ಮಾಡಿತು.

ನಂತರ ನಮ್ಮ ಸ್ನೇಹಿತರಿಬ್ಬರು ವೇದಿಕೆಗೆ ಬಂದು ನಮ್ಮ ಭಾಷೆಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ಮಾತಾಡಿದರು. ಹಳಗನ್ನಡ,ನಡುಗನ್ನಡ ಮತ್ತು ಹೊಸಗನ್ನಡದ ಕಾಲ, ಆ ಕಾಲದ ಶ್ರೇಷ್ಠ ಕವಿಗಳು, ಜ್ಞಾನಪೀಠ ಪ್ರಶಸ್ತಿವಿಜೇತರು ಮತ್ತು ಅವರ ಕೃತಿಗಳ ಬಗ್ಗೆ ಬೆಳಕು ಬೀರಿದರು.

ಅನಂತರ ನಮ್ಮ ಸಹೋದ್ಯೋಗಿಗಳೊಬ್ಬರು ಕರ್ನಾಟಕವನ್ನು ಚಂದವಾಗಿ ವರ್ಣಿಸುವ ಚಿತ್ರಿಸಿರುವ ಕವಿ ನಿಸಾರ್ ಅಹ್ಮದ್ ಅವರ ’ಜೋಗದ ಸಿರಿ ಬೆಳಕಿನಲ್ಲಿ’ ಹಾಡನ್ನು ಸೊಗಸಾಗಿ ಹಾಡಿದರು.

ಕೊನೆಯದಾಗಿ ಆಡಳಿತ ಸಿಬ್ಬಂದಿಯಲ್ಲೊಬ್ಬರು ವೇದಿಕೆಗೆ ಬಂದು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಕರು ನಿರೂಪಣೆಯ ಮಧ್ಯೆ ತಮ್ಮ ಹಾಸ್ಯ ಮಿಶ್ರಿತ ಮಾತುಗಳಿಂದ ಜನರನ್ನು ನಗಿಸಿ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟರು. ಇದೆಲ್ಲಾ ಆದ ಮೇಲೆ ಮೈಸೂರ್ ಪಾಕನ್ನು ನೆರೆದಿದ್ದವರಿಗೆಲ್ಲಾ ಹಂಚಿದರು. ರಾಜ್ಯೋತ್ಸವ ಕಾರ್ಯಕ್ರಮವು ಚೆನ್ನಾಗಿ ನೆರವೇರಿದ ಕಾರಣವೂ ಸೇರಿ ಮೈಸೂರು ಪಾಕ್ ತುಂಬಾನೆ ಸಿಹಿ ಆಗಿತ್ತು :)

ಕಾರ್ಯಕ್ರಮವು ಕೇವಲ ೧ ಘಂಟೆ ಮಾತ್ರ ನಡೆದಿದ್ದರೂ ನಮಗೆಲ್ಲ ಮರೆಯಲಾರದ ಅನುಭವವನ್ನು ನೀಡಿತು.ಕಾರಣಾಂತರಗಳಿಂದ ಈ ಬಾರಿ ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಲಿಲ್ಲವಾದರೂ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವದ ಆಚರಣೆ, ಸಹೋದ್ಯೋಗಿಗಳು ತೋರುತ್ತಿರುವ ಉತ್ಸುಕತೆಯನ್ನು ನೋಡಿ ಸಂತಸವಾಗುತ್ತಿದೆ.ಇದೇ ರೀತಿ ಹುಮ್ಮಸ್ಸನ್ನು ಉತ್ಸಾಹವನ್ನು ಎಲ್ಲರೂ ತೋರುತ್ತಿದ್ದರೆ ಇನ್ನು ಮುಂದೆ ’ಕನ್ನಡ ರಾಜ್ಯೋತ್ಸವ’ವು ವೇಲಂಕಣಿ ಸಂಸ್ಥೆಯಲ್ಲಿ ಕಡ್ಡಾಯ ಆಚರಣೆಯಾಗಿ ಜನಪ್ರಿಯವಾಗುವದರಲ್ಲಿ ಯಾವುದೇ ಸಂಶಯವಿಲ್ಲ.

ವಂದನೆಗಳೊಂದಿಗೆ,
ವೆಲಂಕಣಿ ಕನ್ನಡಿಗ

ಚಿತ್ರಗಳು:





















ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.