Wednesday, December 23, 2009

ಆರೆಕಲ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ನಿತ್ಯೋತ್ಸವ ತಾಯೇ ನಿನಗೆ ನಿತ್ಯೋತ್ಸವದ ಖ್ಯಾತ ಕವಿ ಡಾI. ಕೆ. ಎಸ್. ನಿಸ್ಸಾರ್ ಅಹಮದ್ ವಾಣಿಯಂತೆ ಡಿಸೆಂಬರ್ ೩, ೨೦೦೯ ರಂದು ಆರೆಕಲ್ ಲೆಕ್ಸಿಂಗ್ಟನ್ ಟವರ್ ಬೆಂಗಳೂರಿನಲ್ಲಿ ಎರಡನೇ ವರುಷವೂ ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಯಶಸ್ಸು ಕಂಡಿತು. ಆರೆಕಲ್ ನಂತಹ ಬಹುರಾಷ್ಟ್ರೀಯ ಕಂಪನಿಗೆ ಕರ್ನಾಟಕದ ಜನಪದ ಕಲೆ ಸಂಸ್ಕೃತಿಯ ಪರಿಚಯ ಈ ವರುಷದ ಧ್ಯೇಯವಾಗಿತ್ತು. ಸಮಯದ ಅಭಾವದ ಕಾರಣ ಕೇವಲ ೨ ಗಂಟೆಗಳ ಕಾಲ ರಸಸಂಜೆ ಆಯೋಜಿಸಲಾಗಿತ್ತು.

ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ. ರವಿಶಂಕರ್ ಅವರ ಕೊಳಲುವಾದನ ಕನ್ನಡ ಆರಾಧನೆಗೆ ಕನ್ನಡಿ ಹಿಡಿದಂತಿತ್ತು. ಕನ್ನಡದ ರವಿ ಮೂಡಿಬಂದ ಸಮೂಹಗಾಯನ ಆ ಸಂಜೆಗೆ ರಂಗೇರಿಸಿತ್ತು.

ಮಂಥರೆಯ ದುರ್ಮಂತ್ರ, ಆ ಸಂಜೆಯ ರಸದೌತಣಕ್ಕಾಗೆ ಆಯೋಜಿಸಿದ್ದ ಯಕ್ಷಗಾನ, ಸುಮಾರು ೨೦೦ ರಸಿಕರನ್ನು; ತಮ್ಮ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಗಂಧರ್ವಲೋಕದಲ್ಲಿ ತೆಲಾಡುವಂತೆ ಮಾಡಿತು.
ಮಂಥರೆಯ ದುರ್ಮಂತ್ರ ರಾಮಾಯಣದಲ್ಲಿ ಮಂಥರೆಯು ಭರತನ ತಾಯಿ ಕೈಕೇಯಿಗೆ  ಚಾಡಿ ಹೇಳುವ ಪ್ರಸಂಗ. ಸರ್ವಶ್ರೀ ಮಂಟಪ ಉಪಾದ್ಯಾಯರ ಕೈಕೇಯಿ ಸ್ತ್ರೀ ವೇಷದ ಅಂದ ಚೆಂದ, ವಯ್ಯಾರದ ನಡಿಗೆ, ಹಾವ ಭಾವ ನೋಡಿ ನೆರೆದಿದ್ದ ಮಹಿಳೆಯರು ಅಸೂಯೆಪಟ್ಟು; ಉಪಾಧ್ಯಾಯರು ನಿಜವಾಗಿ ಸ್ತ್ರೀಯಲ್ಲವೆಂದು ಸಮಾಧಾನವಾದರು. ದುರ್ಮಂತ್ರ ಹೇಳಲು ಬಂದ ಯಕ್ಷಲೋಕದ ಹಾಸ್ಯ ಕಲಾವಿದರಾದ ಶ್ರೀ. ಚಪ್ಪರ್ಮನೆ ಶ್ರೀಧರ ಹೆಗ್ಡೆ ಮಂಥರೆಯಾಗಿ ಮಿಂಚಿದರು. ಅವರ ಕಲಾ ಫ್ರೌಡಿಮೆ, ಅಭಿನಯದಲ್ಲಿ ತೋರಿದ ಹಲವು ಮಜಲು, ಮುಖಭಾವ, ಹಣ್ಣು ಹಣ್ಣು ಮುದುಕಿ ಕುರೂಪಿ ಮಂಥರೆಯ ನಡೆ ಭಂಗಿ, ಕನ್ನಡ ಗಂಧವೇ ಇಲ್ಲದ ವೀಕ್ಷಕರ ಮಂತ್ರಮುಗ್ದತೆಯೇ ತುಲನೆಗೆ ಅಸಾದ್ಯವೆಂದು ಸಾರಿಹೇಳಿತ್ತು. ಸುಮಾರು ೫೦೦ - ೬೦೦ ವರುಷ ಪರಂಪರೆ ಇರುವ ಯಕ್ಷಗಾನ ಪ್ರದರ್ಶನ, ವಿವಿಧ ಭಾಷೆ, ಸಂಸ್ಕೃತಿ;  ಸಭೀಕರ ಮೆಚ್ಚುಗೆಯ ಕರತಾಡನವೇ ಕಾರ್ಯಕ್ರಮದ ಯಶಸ್ಸಿಗೆ ಮುದ್ರೆಯೋತ್ತಿದಂತಿತ್ತು.


ಚಿತ್ರಗಳು: 











ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Sunday, December 6, 2009

ಇನ್ ಫೋಸಿಸ್ ಬೆಂಗಳೂರಿನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ಇನ್ಫೋಸಿಸ್ ಬೆಂಗಳೂರಿನಲ್ಲಿ ನವೆಂಬರ್ ೧೨ ರಂದು ಕನ್ನಡ ನಾಡ ಹಬ್ಬ ನಡೆಯಿತು. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವವನ್ನು ಥೀಮ್ ಆಗಿ ಇಟ್ಟುಕೊಂಡು ನೆಡಸಿದ ಕಾರ್ಯಕ್ರಮದಲ್ಲಿ ೧೯೩೪ ರಿಂದ ಹಿಡಿದು ೨೦೦೯ ರ ವರೆಗಿನ ಎಲ್ಲ ಚಿತ್ರ ರಂಗದ ವಿಚಾರಗಳನ್ನೂ ತಿಳಿಸಲಾಯಿತು. ಹಾಡು, ಹಾಸ್ಯ ಮತ್ತು ನೃತ್ಯದಿಂದ ತುಂಬಿದ ಈ ಕಾರ್ಯಕ್ರಮವನ್ನು ೧೫೦೦ಕ್ಕು ಹೆಚ್ಚು ಜನ ನೋಡಿ ಆನಂದಿಸಿದರು.ಇನ್ಫೋಸಿಸ್ ನಲ್ಲಿ ಐದು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಕನ್ನಡ ಕಲಿಯ ಬಗ್ಗೆ ಇದರಲ್ಲಿ ಮಾತನಾಡಿ ನಮ್ಮ ಕನ್ನಡ ಮೇಷ್ಟ್ರಿಗೆ ಸನ್ಮಾನಿಸಲಾಯಿತು.



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Thursday, December 3, 2009

ಹನಿವೆಲ್ ನಲ್ಲಿ ನಡೆದ ಕನ್ನಡ ನಾಡಹಬ್ಬ 2009

ನವೆಂಬರ್ ೨೬ ರಂದು ಅದ್ಧೂರಿಯಾಗಿ ಹನಿವೆಲ್ ಸಂಸ್ಥೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗಷ್ಟೇ ಶಿವಾಧೀನರಾದ ಗಾನ ಗಂಗೆ ಗಂಗೂ ಭಾಯಿ ಹಾನಗಲ್ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚುಟುಕು, ಪದಬಂಧದಂತಹ ಹಲವು ಸ್ಪರ್ಧೆಗಳನ್ನು ಈ  ಸಂಧರ್ಭದಲ್ಲಿ ಏರ್ಪಡಿಸಲಾಗಿತ್ತು.  ಖ್ಯಾತ ಸಾಹಿತಿ ಲಕ್ಷ್ಮೀನಾರಾಯಣ ಭಟ್ಟರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದ ಚಿತ್ರಗಳು:









































































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಮ್ಯಾನ್ ಹಟ್ಟನ್ ಅಸೋಸಿಯೇಟ್ಸ್ ಅಲ್ಲಿ "ಸೆಲೆಬ್ರೇಟ್ ನಮ್ಮ ಬೆಂಗಳೂರು"

ಮ್ಯಾನ್ ಹಾಟನ್ ಅಸೋಸಿಯೇಟ್ಸ್ ಕಂಪನಿಯಲ್ಲಿ ರಾಜ್ಯೋತ್ಸವದ ಪ್ರಯುಕ್ತ "ಸೆಲೆಬ್ರೇಟ್ ನಮ್ಮ ಬೆಂಗಳೂರು " ಅನ್ನುವ ವಿಶೇಷ ದಿನ ಆಚರಿಸಲಾಯಿತು. ಕರ್ನಾಟಕದ ವಿಶೇಷ ಅಡುಗೆ ಅಂದಿನ ವಿಶೇಷವಾಗಿತ್ತು. ಸತೀಶ್ ಗೋವಿಂದನ್ ಅವರ ಕರೋವಾಕೆ, ಬೆಂಗಳೂರಿನ ಬಗ್ಗೆ ರಸ ಪ್ರಶ್ನೆ, ಬೆಂಗಳೂರು-ಕರ್ನಾಟಕದ ಬಗ್ಗೆ ವಿಶೇಷ ಪ್ರಾತ್ಯಕ್ಷಿತೆ ಅಂದಿನ ವಿಶೇಷವಾಗಿತ್ತು.

ಕಾರ್ಯಕ್ರಮದ ಪಟ್ಟಿಯ ಚಿತ್ರ ಇಂತಿದೆ:
























ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 2, 2009

ಮೈಂಡ್ ಟೆಕ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ಮೈಂಡ್ ಟೆಕ್ ನಲ್ಲಿ  ಪ್ರತಿ  ವರ್ಷವೂ  ಆಚರಿಸುವಂತೆ  ಈ  ವರ್ಷವೂ  ಕನ್ನಡ  ರಾಜ್ಯೋತ್ಸವವನ್ನು  ನವೆಂಬರ್  6 ರಂದು  ಆಚರಿಸಲಾಯಿತು . ಉತ್ತರ  ಕರ್ನಾಟಕದಲ್ಲಿ  ನೆರೆ  ಹಾವಳಿಯಲ್ಲಿ  ಜನರು  ಸಂಕಷ್ಟಕ್ಕೆ  ಒಳಗಾದ  ಕಾರಣ  ಈ  ಸಲ  ಆಚರಣೆ  ಸರಳವಾಗಿತ್ತು. ಇದು  4 ನೇ  ವರ್ಷದ  ಆಚರಣೆ.













1. ಬೆಳಿಗ್ಗೆ 10:00 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು .
2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು .
3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು .
4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್ನು ವಿನಯ್  ಮಠರವರು ವಹಿಸಿಕೊಂಡು ಚೆನ್ನಾಗಿ ನಡೆಸಿಕೊಟ್ಟರು .
5. ನಂತರ  ನಾಡಗೀತೆ  - ಜಯ  ಭಾರತ  ಜನನಿಯ  ತನುಜಾತೆ  ಜಯಹೇ  ಕರ್ನಾಟಕ  ಮಾತೆ ಹಾಡಲಾಯಿತು .
6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ವಿನಯ್ ಮಾತನಾಡಿದರು .
7. ಗಣ್ಯರು ಕೂಡ ಕನ್ನಡದ  ಬಗ್ಗೆ  ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.
8. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳ  ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ  ಹಂಚುವುದರ  ಮೂಲಕ  ಅದರ  ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ಈ  ವರ್ಷ  ಬೆಳಗಾವಿಯ "ಕರದಂಟ್ ಸಿಹಿ " ಹಂಚಿದೆವು .
9. ಕೆಲವರು  ಸಮಾಜ  ಸೇವಕ  ಸಂಘದ  ಕನ್ನಡ  ಪದ್ಯವುಳ್ಳ ಟಿ- ಶರ್ಟ್  ಧರಿಸಿದ್ದರು.

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Tuesday, December 1, 2009

ಸಿಂಫೋನಿ ಸರ್ವಿಸಸ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009


 
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.