ನಾಡ ಹಬ್ಬದ ಅಂಗವಾಗಿ, ’ಸಿ ಜಿ ಐಯ್’ ನಲ್ಲಿ ಕನ್ನಡ ಘೋಷಣೆಗಳಿರುವ ಅಂಗಿಗಳನ್ನು ಮಾಡಿಸಲಾಯಿತು. "ನಮ್ಮ ನಾಡು ನಮ್ಮ ಹೆಮ್ಮೆ" ಎಂಬ ಸಾಲು ಹಾಗೂ ನಾಡ ಬಾವುಟ ಇದರ ಮೇಲೆ ಒರೆ ಹಚ್ಚಲಾಗಿತ್ತು. ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ಕನ್ನಡಿಗರು ಈ ಅಂಗಿಗಳನ್ನು ಕೊಂಡರು.
ನಾಡ ಹಬ್ಬದ ದಿನ ನಾಡ ದೇವಿ ತಾಯಿ ಭುವನೇಶ್ವರಿ ಚಿತ್ರಕ್ಕೆ ಹೂ ಮಾಲೆ ಹಾಕಿ, ವಿದೇಶದಿಂದ ಬಂದಿದ್ದವರ ಕೈಯಲ್ಲಿ ದೀಪವನ್ನು ಬೆಳಗಿಸಲಾಯಿತು. ನಂತರ ಅವರಿಗೆ ಕನ್ನಡ ಮ್ಯಾನೇಜರ್ ಒಬ್ಬರು ಕನ್ನಡದ ಹಿರಿಮೆಯನ್ನು ತಿಳಿಸಿಕೊಟ್ಟರು.
ಆ ವಿದೇಶಿಯರು ಮುಂದಿನ ವರ್ಷ ನೀವುಗಳು ಇನ್ನೂ ಜೋರಾಗಿ ಈ ಹಬ್ಬವನ್ನು ಆಚರಿಸಬೇಕು ಎಂಬ ಮಾತುಗಳನ್ನು ಹೇಳಿದ್ದು ವಿಶೇಷ. :) ಆ ವಿದೇಶಿ ಅತಿಥಿಗಳಿಗೆ ಕನ್ನಡದ ಅಂಗಿಗಳನ್ನು ನೀಡಿ, ಸತ್ಕರಿಸಲಾಯಿತು.
ನಾಡ ಹಬ್ಬದ ದಿನ ನಾಡ ದೇವಿ ತಾಯಿ ಭುವನೇಶ್ವರಿ ಚಿತ್ರಕ್ಕೆ ಹೂ ಮಾಲೆ ಹಾಕಿ, ವಿದೇಶದಿಂದ ಬಂದಿದ್ದವರ ಕೈಯಲ್ಲಿ ದೀಪವನ್ನು ಬೆಳಗಿಸಲಾಯಿತು. ನಂತರ ಅವರಿಗೆ ಕನ್ನಡ ಮ್ಯಾನೇಜರ್ ಒಬ್ಬರು ಕನ್ನಡದ ಹಿರಿಮೆಯನ್ನು ತಿಳಿಸಿಕೊಟ್ಟರು.
ಆ ವಿದೇಶಿಯರು ಮುಂದಿನ ವರ್ಷ ನೀವುಗಳು ಇನ್ನೂ ಜೋರಾಗಿ ಈ ಹಬ್ಬವನ್ನು ಆಚರಿಸಬೇಕು ಎಂಬ ಮಾತುಗಳನ್ನು ಹೇಳಿದ್ದು ವಿಶೇಷ. :) ಆ ವಿದೇಶಿ ಅತಿಥಿಗಳಿಗೆ ಕನ್ನಡದ ಅಂಗಿಗಳನ್ನು ನೀಡಿ, ಸತ್ಕರಿಸಲಾಯಿತು.
ನಂತರ ಎಲ್ಲರಿಗೂ ಹೋಳಿಗೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
\ ಚಿತ್ರಗಳು: \
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
No comments:
Post a Comment