Thursday, December 9, 2010

ಹನಿವೆಲ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ - ೨೦೧೦

ಹಲವು ವರ್ಷಗಳಿಂದ 'ಹನಿವೆಲ್' ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ನವೆಂಬರ್ ೧೫ ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಮುಖ್ಯ ಕಛೇರಿಯಲ್ಲಿ ಹನಿವೆಲ್ ನ ಕನ್ನಡ ರಾಜ್ಯೋತ್ಸವ ಸಮಾರಂಭವು ನಡೆಯಿತು. ಈ ಬಾರಿಯ ಆಚರಣೆಯನ್ನು ರಂಗ ಭೂಮಿಗೆ ಸಮರ್ಪಿಸಲಾಯಿತು.

ಸಮಾರಂಭದ ದಿನದ ಹಿಂದೆಯೇ ಅಂತ್ಯಾಕ್ಷರಿ, ಕರ್ನಾಟಕದ ಸ್ಥಳಗಳ ಮೇಲೆ ನಿರೂಪಣೆ (ಪ್ರೆಜೆಂಟೇಷನ್) ಮಾಡುವುದು, ಪದಬಂದ, ರಸಪ್ರಶ್ನೆ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಸಮಾರಂಭದ ದಿನದಂದು ಪ್ರಶಸ್ತಿಗಳನ್ನು ವಿತರಿಸಲಾಯಿತು. ಬೆಂಗಳೂರಿನಲ್ಲಿರುವ ಹನಿವೆಲ್ ನ ಎಲ್ಲಾ ಕಛೇರಿಗಳಲ್ಲಿ ರಂಗೋಲಿಗಳನ್ನು ಹಾಕಲಾಗಿತ್ತು ಮತ್ತು ಎಲ್ಲ ಕಛೇರಿಗಳಲ್ಲಿ ಕನ್ನಡ ಪುಸ್ಥಕಗಳನ್ನು ವಿತರಣೆ ಮಾಡಲಾಯಿತು. ಹನಿವೆಲ್ ನ ಎಲ್ಲಾ ವಾಹನಗಳನ್ನು ಕನ್ನಡದ ಬಾವುಟಗಳಿಂದ ಸಿಂಗರಿಸಲಾಯಿತು. ನವೆಂಬರ್ ೧೫ ರಂದು ಅನೇಕರು ಕರ್ನಾಟಕದ ಸಂಸ್ಕೃತಿ ಬಿಂಬಿಸುವಂತೆ ಉಡುಪುಗಳನ್ನು ತೊಟ್ಟಿದ್ದರು.

ಸಮಾರಂಭಕ್ಕೆ ಮಾಸ್ಟರ್ ಹಿರಣ್ಣಯ್ಯನವರನ್ನು ಅಧ್ಯಕ್ಷರನ್ನಾಗಿ ಬರಮಾಡಿಕೊಳ್ಳಲಾಯಿತು. "ನಮ್ಮ ಶಾರದೆ" ಎಂಬ ಭರತನಾಟ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವು ಶುರುವಾಯಿತು. ಜನಪದ ಲೋಕದ ಡೊಳ್ಳು ಕುಣಿತ ಎಲ್ಲರನ್ನು ಎದ್ದು ಕುಣಿಯುವಂತೆ ಮಾಡಿತು. "ಶ್ರೀ ಕೃಷ್ಣ ಸಂದಾನ" ಎಂಬ ಹಾಸ್ಯ ನಾಟಕ ಜನರನ್ನು ಬಹಳ ಚೆನ್ನಾಗಿ ರಂಜಿಸಿತು. ಶಂಕರ್ ಶಾನ್ಬೋಗ್ ರ ಅಧ್ಬುತ ಸಂಗೀತದೊಂದಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವು ಮುಕ್ತಾಯಗೊಂಡಿತು.

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
ಚಿತ್ರಗಳು:




No comments:

Post a Comment